Webdunia - Bharat's app for daily news and videos

Install App

ಹಿರಿಯ ಪೊಲೀಸ್ ರಿಂದ ಪೊಲೀಸರಿಗೇ ದೋಖಾ? ಕೋಟ್ಯಂತರ ಗೋಲ್ ಮಾಲ್ ಶಂಕೆ!

Webdunia
ಬುಧವಾರ, 19 ಜೂನ್ 2019 (16:20 IST)
ಹಿರಿಯ ಪೊಲೀಸ್‌ ಅಧಿಕಾರಿಗಳಿಂದ ಪೊಲೀಸ್ ಸಿಬ್ಬಂದಿಗೆ ದೋಖಾ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿದೆ.

ಮೈಸೂರು ಪೊಲೀಸ್ ಅಧಿಕಾರಿಗಳಿಂದ ಕೋಟಿ ಕೋಟಿ ಲೂಟಿ ಹೊಡೆಯಲಾಗಿದೆ ಎಂಬ ಆರೋಪ ಕೇಳಿಬರುತ್ತಿದೆ.
ಮೈಸೂರಿನ ಪ್ರತಿಷ್ಠಿತ ಪೊಲೀಸ್ ಭವನದ ಹೆಸರಿನಲ್ಲಿ ಅಕ್ರಮ ನಡೆದಿದೆ ಎನ್ನಲಾಗುತ್ತಿದೆ. ಬರೋಬ್ಬರಿ 18ವರ್ಷದಿಂದ ಅವ್ಯವಹಾರದಲ್ಲೇ ನಡೆದುಕೊಂಡು ಬಂದಿರುವ ಪೊಲೀಸ್ ಭವನ ಈಗ ಸುದ್ದಿಯಾಗುತ್ತಿದೆ.

ಸ್ಪಂದನ ಸಹಕಾರ ಸಂಘದ ಹೆಸರಿನಲ್ಲಿ ಪೊಲೀಸ್ ಸಿಬ್ಬಂದಿಯಿಂದ ಹಣ ವಸೂಲಿ ಮಾಡಿ ಭವನ ನಿರ್ಮಾಣವಾಗಿತ್ತು.
ಹಣ ಹೊಡೆಯುವ ಸಲುವಾಗಿ ಪೊಲೀಸ್ ವೆಲ್‌ಫೇರ್ ಟ್ರಸ್ಟ್ ಸ್ಥಾಪಿಸಿ ವ್ಯವಹಾರ ನಡೆಸಲಾಗಿದೆ. ಸಹಕಾರ ಸಂಘದಿಂದ ಟ್ರಸ್ಟ್‌ಗೆ ವರ್ಗಾವಣೆಯಾದ ಮಾಹಿತಿ ಸಂಘದ ಸದಸ್ಯರಿಗೇ ಇಲ್ಲ. ಪೊಲೀಸ್ ವೆಲ್‌ಫೆರ್ ಟ್ರಸ್ಟ್ ಸ್ಥಾಪಿಸಿ ಸರ್ಕಾರಕ್ಕೂ ಹಣ ಕೊಡದೆ, ಪೊಲೀಸರಿಗೂ ಸಹಾಯ ಮಾಡದೆ ದೋಖಾ ಮಾಡಲಾಗಿದೆ.

40 ರಿಂದ 50 ಕೋಟಿ ರೂ.ವರೆಗೂ ಅವ್ಯವಹಾರ ಆಗಿರುವ ಆರೋಪ ಇದಾಗಿದೆ.
ಪೊಲೀಸ್ ಭವನ ನಿರ್ಮಾಣ ಸಂದರ್ಭದಲ್ಲಿ ಆಯುಕ್ತರಾಗಿದ್ದ ಕೆಂಪಯ್ಯ ಮೇಲೆ ಗಂಭೀರ ಆರೋಪ ಕೇಳಿಬಂದಿದೆ. ಈಗಲೂ ಸಿ.ಜೆ.ಮುರುಳೀಧರ್ ಎಂಬ ಎಎಸ್‌ಐ ಸಿಬ್ಬಂದಿಯಿಂದ ಟ್ರಸ್ಟ್ ಹೆಸರಿನಲ್ಲಿ ನಿರಂತರ ಅವ್ಯವಹಾರ ನಡೆಯುತ್ತಿದೆ.
ಸರ್ಕಾರಿ ಪೊಲೀಸ್ ಸೇವೆಯಲ್ಲಿದ್ದು, ಟ್ರಸ್ಟ್‌ಗೆ ಸಹಾಯಕ ಅಕೌಂಟೆಂಟ್ ಆಗಿದ್ದಾರೆ ಮುರುಳೀಧರ್. ಪಾಲಿಕೆಗೆ 1.65 ಲಕ್ಷ ರೂ. ಹಣ ಪಾವತಿಸಬೇಕಿದೆ ಪೊಲೀಸ್ ಭವನ.

ಪಾಲಿಕೆಯಿಂದ ನೀಲಿ ನಕ್ಷೆಯ ಅನುಮತಿಯನ್ನು ಪಡೆದುಕೊಳ್ಳದ ಪೊಲೀಸ್ ವೆಲ್‌ಫೇರ್ ಟ್ರಸ್ಟ್ ಈಗ ಚರ್ಚೆಗೆ ಗ್ರಾಸವೊದಗಿಸಿದೆ.
ಈವರೆಗೂ ಪೊಲೀಸ್ ಭವನದ ಕಟ್ಟಡ ಕಮಾಂಡೆಂಟ್ ಹೆಸರಿನಲ್ಲಿ ಇದೆ. ಪೊಲೀಸ್ ಭವನ ನಿರ್ಮಾಣ ಆಗಿರುವ ಸ್ಥಳವೂ ಸರ್ಕಾರದ ಆಸ್ತಿ. 5 ಎಕರೆ ಜಾಗದಲ್ಲಿ ನಿರ್ಮಾಣವಾಗಿದೆ ಪೊಲೀಸ್ ಭವನ. ಅಕ್ರಮವಾಗಿ ಪೊಲೀಸ್ ಭವನ ನಿರ್ಮಾಣವಾಗಿರುವ ಆರೋಪವೂ ಕೇಳಿಬಂದಿದೆ.



ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ನಡೆದುಕೊಂಡು ಹೋಗುತ್ತಿದ್ದ ಯುವತಿಗೆ ಕಿರುಕುಳ: ಸಕಲೇಶಪುರ ವ್ಯಕ್ತಿ ಅರೆಸ್ಟ್‌

ರೈತರ ಹೆಸರಿನಲ್ಲಿ ರಾಜಕೀಯ ಮಾಡುವ ವಿಜಯೇಂದ್ರ ಮೋದಿ ಮನೆ ಮುಂದೆ ಪ್ರತಿಭಟಿಸಲಿ: ಶಿವರಾಜ ತಂಗಡಗಿ

ಕಲಾಸಿಪಾಳ್ಯ ಬಿಎಂಟಿಸಿ ಬಸ್ ಸ್ಟ್ಯಾಂಡ್‌ನಲ್ಲಿ ಸ್ಪೋಟಕ ಪತ್ತೆ ಕೇಸ್: ಮೂವರು ಅರೆಸ್ಟ್

ಕೊಲ್ಲಲ್ಪಟ್ಟ ಉಗ್ರರು ಪಾಕ್‌ನವರು ಎಂಬುದಕ್ಕೆ ಪ್ರಮುಖ ಸಾಕ್ಷಿ ಕೊಟ್ಟ ಅಮಿತ್ ಶಾ

ಧರ್ಮಸ್ಥಳ: ಶ್ವಾನ ಪಡೆ ಎಂಟ್ರಿ ಕೊಟ್ಟ ಬೆನ್ನಲ್ಲೇ ಒಂದನೇ ಪಾಯಿಂಟ್ಸ್‌ನ ಹುಡುಕಾಟದಲ್ಲಿ ಮಹತ್ವದ ಬದಲಾವಣೆ

ಮುಂದಿನ ಸುದ್ದಿ
Show comments