Select Your Language

Notifications

webdunia
webdunia
webdunia
webdunia

ಸರ್ಕಾರ ಗಂಡ- ಹೆಂಡತಿ ಬಿಟ್ಟವರು ಲವ್ ಮಾಡಿದಂತಿದೆ ಎಂದೋರಾರು?

ಸರ್ಕಾರ ಗಂಡ- ಹೆಂಡತಿ ಬಿಟ್ಟವರು ಲವ್ ಮಾಡಿದಂತಿದೆ ಎಂದೋರಾರು?
ಬೆಳಗಾವಿ , ಮಂಗಳವಾರ, 4 ಜೂನ್ 2019 (18:38 IST)
ರಾಜ್ಯದ ದೋಸ್ತಿ ಸರ್ಕಾರದ ವಿರುದ್ಧ ಗಂಭೀರ ವ್ಯಂಗ್ಯವಾಡಲಾಗಿದೆ.

ಮಾಜಿ ಶಾಸಕ ಲಕ್ಷ್ಮಣ ಸವದಿ ಮೈತ್ರಿ ಸರಕಾರದ ವಿರುದ್ಧ ಕಿಡಿಕಾರಿದ್ದಾರೆ. ಈ ಸರ್ಕಾರ ಗಂಡ ಬಿಟ್ಟ ಹೆಂಡತಿ ಮತ್ತು ಹೆಂಡತಿ ಸತ್ತ ಗಂಡ ಲವ್ ಮ್ಯಾರೇಜ್ ಆದಂತಿದೆ.

ಸದ್ಯ ಇವರಿಬ್ಬರೂ ಹೊಸದಾಗಿ ಮದುವೆಯಾದಂತಿದೆ ಅಂತ ಸವದಿ ವ್ಯಂಗ್ಯವಾಡಿದ್ದಾರೆ.
ಸದ್ಯ ಒಬ್ಬರಿಗೊಬ್ಬರಿಗೆ ತಾಳ ತಂತಿ ಇಲ್ಲ- ಹೊಂದಾಣಿಕೆ‌ ಇಲ್ಲ. ಅಧಿಕಾರಕ್ಕೆ ಬಂದು ಒಂದು ವರ್ಷವಾದರೂ ಸಹ ಯಾವುದೇ ಯೋಜನೆ ಇಲ್ಲ ಎಂದು ದೂರಿದ್ದಾರೆ.

ರಾಜ್ಯ ಸರ್ಕಾರದವರು ನರೇಗಾ ಯೋಜನೆಯಲ್ಲಿ ಕೆಲಸ ಮಾಡಿಸಿ ಅಂತ ಹೇಳ್ತಾರೆ, ಆದರೆ ಆ ಯೋಜನೆ ಕೇಂದ್ರ ಸರ್ಕಾರದ್ದು ಹಾಗಾದರೆ ಇವರ ಕೊಡುಗೆ ಏನು? ಎಂದರು.

ಸಿದ್ದರಾಮಯ್ಯನವರಿಗೂ ಹಾಗೂ ದೇವೆಗೌಡರಿಗೂ 20 ವರ್ಷಗಳ ರಾಜಕೀಯ ದ್ವೇಷವಿದೆ. 2004 ರಲ್ಲಿ ಸಿದ್ದರಾಮಯ್ಯಗೆ ಮುಖ್ಯಮಂತ್ರಿಯಾಗುವ ಅವಕಾಶವಿತ್ತು. ದೇವೆಗೌಡರು ಅದಕ್ಕೆ ಅಡ್ಡಗಾಲು ಹಾಕಿ ಆ ಅವಕಾಶ ತಮ್ಮಿಂದ ಕಸಿದಿದ್ದು ಸಿದ್ದು ಮನಸಿನಲ್ಲಿದೆ ಎಂದರು .



Share this Story:

Follow Webdunia kannada

ಮುಂದಿನ ಸುದ್ದಿ

ಗಂಡ ಸತ್ತರೂ ಅವಳು ನಾಲ್ಕು ಮಕ್ಕಳಿಗೆ ತಾಯಿ