Select Your Language

Notifications

webdunia
webdunia
webdunia
webdunia

'ಸಿದ್ದರಾಮಯ್ಯಗೆ ತಲೆ ಇದೆಯೋ ಇಲ್ವೋ?'

ಜಗದೀಶ್ ಶೆಟ್ಟರ್
ಹುಬ್ಬಳ್ಳಿ , ಭಾನುವಾರ, 20 ಅಕ್ಟೋಬರ್ 2019 (17:18 IST)
ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ಸಚಿವ ಜಗದೀಶ್ ಶೆಟ್ಟರ್ ತೀವ್ರ ಆಕ್ರೋಶ ಹೊರಹಾಕಿದ್ದಾರೆ.

ಕಾಂಗ್ರೆಸ್ ನವರು ಗೋವಾದಲ್ಲಿ ಸುಮ್ಮನೆ ಕುಳಿತುಕೊಂಡರೆ ಮಹದಾಯಿ ವಿವಾದ ಇತ್ಯರ್ಥವಾಗುತ್ತದೆ. ಆದರೆ ಕಾಂಗ್ರೆಸ್ ನವರು ಖ್ಯಾತೆ ತೆಗೆದು ಪ್ರತಿಭಟನೆ ನಡೆಸುತ್ತಿದ್ದಾರೆ ಎಂದು ದೂರಿದರು.

ಗೋವಾ ಸಿಎಂ ಮಾತುಕತೆಗೆ ಸಿದ್ಧರಿದ್ದಾರೆ. ಆದರೆ ಕೈ ಪಡೆ ವಿರೋಧ ಮಾಡೋದನ್ನು ಬಿಡಬೇಕು.  ಸಿದ್ದರಾಮಯ್ಯ ಕಾಂಗ್ರೆಸ್ ಗೆ ಈಚೆಗೆ ಸೇರ್ಪಡೆಗೊಂಡವರು. ಅವರಿಗೆ ಇತಿಹಾಸ ಗೊತ್ತಿಲ್ಲ ಎಂದು ಜರಿದರು.

ಕೇಂದ್ರದಲ್ಲಿ ಯುಪಿಎ ಸರಕಾರ ಇದ್ದಾಗ ತುಮಕೂರು ಸ್ವಾಮೀಜಿಗಳಿಗೆ ಭಾರತ ರತ್ನ ಯಾಕೆ ಕೊಡಲಿಲ್ಲ. ಸಿದ್ದರಾಮಯ್ಯನವರಿಗೆ ತಲೆ ಇದೆಯೋ ಇಲ್ಲವೋ ಗೊತ್ತಿಲ್ಲ. ಹೀಗಂತ ಶೆಟ್ಟರ್ ಹರಿಹಾಯ್ದಿದ್ದಾರೆ.



 

Share this Story:

Follow Webdunia kannada

ಮುಂದಿನ ಸುದ್ದಿ

ಎರಡನೇ ಮಹಡಿಯಿಂದ ಕೆಳಗೆ ಬಿದ್ದ ಮಗು ಬಚಾವ್ ಆಗಿದ್ದು ಹೇಗೆ?