Webdunia - Bharat's app for daily news and videos

Install App

ರೌಡಿಗಳ ಪಾಲಿಗೆ ಸಿಸಿಬಿ ಆಟಕ್ಕುಂಟು ಲೆಕ್ಕಕ್ಕಿಲ್ಲಂದಂಗಾಯ್ತಾ? ಸಿಸಿಬಿ

Webdunia
ಬುಧವಾರ, 23 ಆಗಸ್ಟ್ 2023 (16:04 IST)
ಒಂದು ಕಾಲದಲ್ಲಿ ಸಿಸಿಬಿ ಅಂದ್ರೆ ರೌಡಿಗಳು ಥರ ಥರ ಅಂತ ನಡುತ್ತಿದ್ರು. ಆದ್ರೆ ಇತ್ತಿಚೇಗೆ ರೌಡಿಗಳಿಗೆ ಸಿಸಿಬಿ ಮೇಲಿನ ಭಯ ಕಡಿಮೆ ಆದಂಗೆ ಕಾಣ್ತಿದೆ. ಯಾಕಂದ್ರೆ ಸಿಸಿಬಿ ಕರೆಸಿ ದಿನವಿಡಿ ಒಬ್ಬ ರೌಡಿ ಶೀಟರ್ ವಿಚಾರಣೆ ನಡೆಸಿ ಬಾಲ ಬಿಚ್ಚಿದ್ರೆ ಕಟ್ ಮಾಡ್ತಿವಿ ಅಂತ ಹೇಳಿದ್ಮೇಲೂ ರೌಡಿಗಳು ಬಾಲ ಬಿಚ್ಚಿದ್ದಾರೆ. ಎಸ್ ಮೊನ್ನೆ ಮೊನ್ನೆ 19ನೇ ತಾರೀಖು ಶನಿವಾರ ಪಾತಕಿ ಬೇಕರಿ ರಘುನಾ ಸಿಸಿಬಿ ಪೊಲೀಸ್ರು ಕಚೇರಿಗೆ ಕರೆಸಿ ವಿಚಾರಣೆ ನಡೆಸಿದ್ರು.‌ವಿಚಾರಣೆ ನಡೆಸಿ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗದಂತೆ ವಾರ್ನ್ ಮಾಡಿದ್ರು ಮಾರನೇ ದಿನ 20ನೇ ತಾರೀಖು ಭಾನುವಾರ ಇದೇ ಬೇಕರಿ ರಘು ಅಂಡ್ ಸೈಕಲ್ ರವಿ ಉದ್ಯಮಿಯನ್ನ ಕಿಡ್ನಾಪ್ ಮಾಡಿ ಕೊಲೆಗೆ ಯತ್ನಿಸಿದ್ದಾಗಿ ದೂರು ದಾಖಲಾಗಿದೆ. ಉದ್ಯಮಿ ಗಜೇಂದ್ರ ಎಂಬುವವರು ರಾಮಚಂದ್ರಪುರ ಪಾರ್ಕ್ ಬಳಿ ಇದ್ದಾಗ ಮಾರಾಕಸ್ತ್ರ ಜೊತೆಗೆ ಬಂದಿದ್ದ ದುಷ್ಕರ್ಮಿಗಳು ಗಜೇಂದ್ರ ಕೊಲೆಗೆ ಯತ್ನಿಸಿದ್ರಂತೆ. ಸೈಕಲ್ ರವಿ ಮತ್ತು ಬೇಕರಿ ರಘು ಮುಂದೆ ಕಾರಿನಲ್ಲಿದ್ದಾರೆಂದು ಅವರೆ ಕೊಲೆ ಮಾಡಲು ಹೇಳಿದ್ದಾರೆಂದು ಉದ್ಯಮಿ ಗಜೇಂದ್ರ ಕೊಲೆಗೆ ಮುಂದಾಗಿದ್ದಾಗಿ ಗಜೇಂದ್ರ ದೂರು ನೀಡಿದ್ದಾರೆ. ಸದ್ಯ ಸುಬ್ರಮಣ್ಯಪುರ ಪೊಲೀಸ್ ಠಾಣೆಯಲ್ಲಿ ಸೈಕಲ್ ರವಿ ಮತ್ತಯ ಬೇಕರಿ ರಘು ವಿರುದ್ಧ ಎಫ್ ಐ ಆರ್ ದಾಖಲಾಗಿದ್ದು ಪೊಲೀಸ್ರು ತನಿಖೆ ಮುಂದುವರಿಸಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments