Webdunia - Bharat's app for daily news and videos

Install App

ಈ ರೈತರ ಚಿತ್ತ ಯಾವ ಬೆಳೆಯತ್ತ ಹರಿದಿದೆ ಗೊತ್ತಾ?

Webdunia
ಮಂಗಳವಾರ, 7 ಜುಲೈ 2020 (19:14 IST)
ಅರೆ ಮಲೆನಾಡು  ಜಿಲ್ಲೆಯ ರೈತರು ಮೆಕ್ಕೆಜೋಳ, ಅಡಿಕೆ, ತೆಂಗು ಮುಂತಾದ  ಸಾಂಪ್ರದಾಯಿಕ ಬೆಳೆಗಳಿಂದ ವಿಮುಖರಾಗುತ್ತಿದ್ದಾರೆ.

ದಾವಣಗೆರೆ ಜಿಲ್ಲೆಯ ರೈತರು ಔಷಧ ಸಸ್ಯ ಸೇರಿ ಹೊಸ ಪ್ರಯೋಗದ ತೋಟಗಾರಿಕೆಗೆ ತೆರೆದುಕೊಳ್ಳುತ್ತಿದ್ದಾರೆ.
ಆತ್ಮನಿರ್ಭರ ಯೋಜನೆಯಡಿ ಕೋವಿಡ್-19 ಪ್ಯಾಕೇಜ್‌ ಆಗಿ ಪ್ರಧಾನ ಮಂತ್ರಿಗಳು  20 ಲಕ್ಷ ಕೋಟಿ ರೂಪಾಯಿಗಳನ್ನು ಔಷಧ ಸಸ್ಯ ಬೆಳೆಯುವ ರೈತರಿಗೆ ಸಹಾಯಧನ ನೀಡುವುದಾಗಿ ಘೋಷಿಸಿರುವುದು ಶತಾವರಿ ಬೆಳೆಗಾರರ ಆಸಕ್ತಿಯನ್ನು ಮತ್ತಷ್ಟು ಇಮ್ಮಡಿಗೊಳಿಸಿದೆ.

ಶತಾವರಿ ಎಂಬ ನೂರು ರೋಗಗಳಿಗೆ ಮದ್ದಾಗಿ ಬಳಸುವ ಆಯುರ್ವೇದಿಕ್‌ ಸಸ್ಯಗಳನ್ನು ಬೆಳೆಯುವತ್ತ ರೈತರು ಇದೀಗ ಗಮನ ಹರಿಸಿದ್ದಾರೆ. ರಸಗೊಬ್ಬರ ಬಳಕೆ ಇಲ್ಲದೆ ಬೆಳೆಯುವ ಈ ಬೆಳೆಯಿಂದ ಮಣ್ಣಿನ ಆರೋಗ್ಯ ಕಾಪಾಡಬಹುದಾಗಿದೆ.

ತುಂಗಭದ್ರಾ ನದಿ ದಂಡೆಯ ಈ ಜಿಲ್ಲೆಯ ನೂರಾರು  ರೈತರು  60 ಹೆಕ್ಟೇರ್‌ಗೂ ಅಧಿಕ ಪ್ರದೇಶದಲ್ಲಿ ಶತಾವರಿ  ಬೆಳೆದು ದೇಶದ ಗಮನ ಸೆಳೆದಿದ್ದಾರೆ. ಶತ ಎಂದರೇನೆ ನೂರು, ಇದನ್ನು ನೂರು ರೋಗಗಳ ಔಷಧಿಗಳಿಗೆ ಬೇಸಿಕ್‌ ಇನ್‌ಗ್ರೇಡಿಯೆಂಟ್‌ ಆಗಿ ಬಳಸಲಾಗುತ್ತದೆ. 18 ತಿಂಗಳಿಗೆ ಬೆಳೆ ಕಟಾವಿಗೆ ಬರಲಿದೆ.

ಮಧ್ಯಪ್ರದೇಶದ ಮಾತಿ ತತ್ವ ಅಗ್ರೋ ಇಂಡಸ್ಟ್ರಿ ಎಂಬ ಸಂಸ್ಥೆ ಜಿಲ್ಲೆಯಲ್ಲಿ ಈ ಬೆಳೆ ಬೆಳೆಯಲು ತಾಂತ್ರಿಕ ನೆರವು ನೀಡುತ್ತಿದ್ದು, ಇದೇ ಕಂಪನಿಯೇ ಉತ್ಪನ್ನವನ್ನು ಖರೀದಿಸಲಿದೆ.


ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಅಹಮದಾಬಾದ್ ವಿಮಾನ ದುರಂತ ಆಯ್ತು ಅಂತ ನಾವೇನು ಮೋದಿ ರಾಜೀನಾಮೆ ಕೇಳಿದ್ವಾ

ಇಸ್ರೇಲ್- ಇರಾನ್ ಸಂಘರ್ಷ: ವಿಮಾನಗಳ ಹಾರಾಟ ಸ್ಥಗಿತದಿಂದ ಸಂಕಷ್ಟಕ್ಕೆ ಸಿಲುಕಿದ 18 ಕನ್ನಡಿಗರು

Video: ಪ್ರಿಯಾಂಕಾ ಗಾಂಧಿ ಉದ್ಘಾಟನೆ ಮಾಡಬೇಕೆನ್ನುವಷ್ಟರಲ್ಲಿ ಬಿದ್ದೇ ಹೋಯ್ತು ಫಲಕ

ಅಹಮದಾಬಾದ್‌ ವಿಮಾನ ದುರಂತ: ಇನ್ನೂ ಗುರುತು ಪತ್ತೆಯಾಗದ ಮಾಜಿ ಸಿಎಂ ವಿಜಯ್ ರೂಪಾನಿ ಮೃತದೇಹ

ಚುರುಕುಗೊಂಡ ಮುಂಗಾರು: ಮುಂದಿನ ಮೂರು ದಿನ ವರುಣ ಅಬ್ಬರ, ಆರು ಜಿಲ್ಲೆಗಳಲ್ಲಿ ರೆಡ್‌ ಅಲರ್ಟ್‌

ಮುಂದಿನ ಸುದ್ದಿ
Show comments