ಕೋಲಾರ: ಪತ್ನಿ ಬೇರೊಬ್ಬ ವ್ಯಕ್ತಿ ಜತೆ ಓಡಿಹೋಗಿದ್ದಕ್ಕೆ ನೊಂದ 37ವರ್ಷದ ವ್ಯಕ್ತಿಯೊಬ್ಬ ತನ್ನ ನಾಲ್ಕು ವರ್ಷದ ಮಗಳನ್ನು ಕೊಂದು, ತಾನೂ ಆತ್ಮಹತ್ಯೆಗೆ ಶರಣಾದ ಭೀಕರ ಘಟನೆ ವರದರಿಯಾಗಿದೆ.
ಇದು ಜಿಲ್ಲೆಯ ಮುಳಬಾಗಿಲು ತಾಲ್ಲೂಕಿನಲ್ಲಿ ಮಂಗಳವಾರ ರಾತ್ರಿ ನಡೆದಿದೆ.
ಪತ್ನಿ ಪತ್ರ ಬರೆದಿಟ್ಟು ಪತಿ ಲೋಕೇಶ್ ಜತೆ ಬದುಕಲು ಇಷ್ಟವಿಲ್ಲ. ವಿಚ್ಛೇಧನ ನೀಡಲು ಬಯಸುತ್ತೇನೆ. ನನ್ನನ್ನು ಹುಡುಕಬೇಡಿ ಎಂದು ಬರೆದು ಮನೆ ಬಿಟ್ಟಿದ್ದಳು.
ಈ ವಿಚಾರವಾಗಿ ಲೋಕೇಶ್ ಪೊಲೀಸ್ ಠಾಣೆಗೆ ಬಂದು ದೂರನ್ನು ನೀಡಿರುತ್ತಾನೆ. ನಂತರ, ಅವರು ತಮ್ಮ ಮಗಳು ನಿಹಾರಿಕಾ ಜೊತೆ ಕಾರಿನಲ್ಲಿ ಮನೆಯಿಂದ ಹೊರಟರು.
ನಾಲ್ಕು ವರ್ಷಗಳ ಹಿಂದೆ ಮದುವೆಯಾಗಿದ್ದ ಈ ದಂಪತಿಗೆ ನಾಲ್ಕು ವರ್ಷಗಳ ಹಿಂದೆ ಮದುವೆಯಾಗಿದ್ದರು.
ಮಗಳನ್ನು ಬೇಕರಿಗೆ ಕರೆದೊಯ್ದು, ಆಕೆಗೆ ಇಷ್ಟವಾದ ವಸ್ತುಗಳನ್ನು ತಿನ್ನಿಸಿದ್ದಾರೆ. ನಂತರ, ಕಾರಿನೊಳಗೆ ಆಕೆಯ ಕತ್ತು ಹಿಸುಕಿ ಕೊಂದಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.