Select Your Language

Notifications

webdunia
webdunia
webdunia
webdunia

ಹಬ್ಬಕ್ಕೆಂದು ಬಂದ ಪತ್ನಿಗೆ ಪತಿ ಮಾಡಿದ್ದೇನು ಗೊತ್ತಾ?

ರಾಮನಗರ
ರಾಮನಗರ , ಶನಿವಾರ, 18 ಜನವರಿ 2020 (06:50 IST)
ರಾಮನಗರ : ಪತ್ನಿಯನ್ನು ಹಬ್ಬಕ್ಕೆಂದು ಕರೆದುಕೊಂಡು ಬಂದ ಪತಿಯೇ ಆಕೆಯನ್ನು ಬರ್ಬರವಾಗಿ ಕೊಲೆ ಮಾಡಿದ ಘಟನೆ ಮಾಗಡಿ ತಾಲೂಕಿನ ಅರಳೆಕಟ್ಟೆ ದೊಡ್ಡಿಯಲ್ಲಿ ನಡೆದಿದೆ.



ಪಾರ್ವತಿ(35)ಕೊಲೆಯಾದ ಪತ್ನಿ, ಹನುಮೇಗೌಡ(39)ಕೊಲೆಗೈದ ಪತಿ. ಆಗಾಗ ಸಣ್ಣಪುಟ್ಟ ವಿಚಾರಕ್ಕೆ ಜಗಳ ಮಾಡುತ್ತಿದ್ದ ಪತ್ನಿ ತವರು ಮನೆಗೆ ಹೋಗುತ್ತಿದ್ದಳು. ಶುಕ್ರವಾರ ಸಂಜೆ ಹಬ್ಬಕ್ಕೆಂದು ತವರು ಮನೆಗೆ ಹೋದ ಪತ್ನಿಯನ್ನು ಕರೆದುಕೊಂಡು ಬಂದ ಹನುಮೇಗೌಡ ಹೊಲಕ್ಕೆ ಕರೆದುಕೊಂಡು ಹೋಗಿ ತಲೆಗೆ ಹೊಡೆದು  ಕೆಳಗೆ ಬಿದ್ದ ಆಕೆಯ ತಲೆಯ ಮೇಲೆ ಕಲ್ಲು ಎತ್ತಿಹಾಕಿ ಬರ್ಬರವಾಗಿ ಕೊಲೆ ಮಾಡಿದ್ದಾನೆ.


ತನ್ನ ಕೃತ್ಯದ ಬಗ್ಗೆ ಪೊಲೀಸರಿಗೆ ತಿಳಿಸಿ ತಾನೇ ಪೊಲೀಸರಿಗೆ ಶರಣಾಗಿದ್ದಾನೆ. ಈ ಪ್ರಕರಣ ಮಾಗಡಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದು, ಪೊಲೀಸರು ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ಚಿಕಾಗೋದಲ್ಲಿ ಭಾರತೀಯ ಮೂಲದ ಯುವತಿಯ ಶವ ಪತ್ತೆ