Select Your Language

Notifications

webdunia
webdunia
webdunia
webdunia

ಭಿಕ್ಷೆ ಬೇಡಿ ಸಿಎಂಗೆ ಹಣ ಕೊಡುವೆ ಎಂದು ಡಿಕೆ ಶಿವಕುಮಾರ್

ಭಿಕ್ಷೆ ಬೇಡಿ ಸಿಎಂಗೆ ಹಣ ಕೊಡುವೆ ಎಂದು ಡಿಕೆ ಶಿವಕುಮಾರ್
ಬೆಂಗಳೂರು , ಶನಿವಾರ, 2 ಮೇ 2020 (22:05 IST)
ಕಾರ್ಮಿಕರನ್ನು ಅವರ ಅವರ ಊರಿಗೆ ಕಳಿಸುವಲ್ಲಿ ಸರಕಾರ ನಿರ್ಲಕ್ಷ್ಯವಹಿಸಿದೆ ಎಂದು ಕೆಪಿಸಿಸಿ ಅಧ್ಯಕ್ಷರು ದೂರಿದ್ದಾರೆ.

ತೀವ್ರ ತೊಂದರೆಯಲ್ಲಿರುವ ಕಾರ್ಮಿಕರನ್ನು ಅವರ ಊರಿಗೆ ಹೋಗೋಕೆ ಬಸ್ ವ್ಯವಸ್ಥೆ ಕಲ್ಪಿಸಬೇಕು. ಮುಖ್ಯಮಂತ್ರಿಗಳೇ ನಿಮಗೆ ಎಷ್ಟು ಹಣ ಬೇಕು ಹೇಳಿ? ಕೆಪಿಸಿಸಿ ವತಿಯಿಂದ ನಾನು ಕೊಡುತ್ತೇನೆ ಅಂತ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.

ಬೆಂಗಳೂರಿನ ಕೆಂಪೇಗೌಡ ಬಸ್ ನಿಲ್ದಾಣದಲ್ಲಿದ್ದ ಕಾರ್ಮಿಕರ, ಜನರ ಕಷ್ಟ ಆಲಿಸಿದ ಡಿ.ಕೆ.ಶಿವಕುಮಾರ್ ಸಾರಿಗೆ ವ್ಯವಸ್ಥೆ ಸಮರ್ಪಕವಾಗಿ ಕಲ್ಪಿಸದ ಸರಕಾರದ ವಿರುದ್ಧ ಗರಂ ಆದರು.

ಹೆಣ್ಣುಮಕ್ಕಳಿಗೆ ಭದ್ರತೆ ಒದಗಿಸಬೇಕು. ಉಳಿದುಕೊಳ್ಳಲು ವ್ಯವಸ್ಥೆ ಮಾಡಬೇಕು. ಬಸ್ ಗಳು ಹೆಚ್ಚಿಗೆ ಇಲ್ಲದಿರುವುದರಿಂದ ಕಾರ್ಮಿಕರು ಪರದಾಡುತ್ತಿದ್ದಾರೆ. ಹೀಗಾಗಿ ಹೆಚ್ಚು ಬಸ್ ಗಳನ್ನು ಒದಗಿಸಬೇಕು. ಅವರಿಗೆ ಊಟದ ವ್ಯವಸ್ಥೆ ಮಾಡಬೇಕೆಂದರು.

 


Share this Story:

Follow Webdunia kannada

ಮುಂದಿನ ಸುದ್ದಿ

ಕಾಡಿನಲ್ಲಿ ಮಹಿಳೆ ಮೇಲೆ ಮುಗಿಬಿದ್ದ ಕಾಮುಕ : ಆ ಮೇಲೆ ಏನಾಯ್ತು?