ಬೆಂಗಳೂರು: ರಾಜ್ಯ ಕಾಂಗ್ರೆಸ್ ನಲ್ಲಿ ಅಧಿಕಾರ ಹಂಚಿಕೆ ವಿಚಾರ ಬೂದಿ ಮುಚ್ಚಿದ ಕೆಂಡದಂತಿದೆ. ಇದರ ನಡುವೆ ಸಿದ್ದರಾಮಯ್ಯನವರಿಗೆ ಠಕ್ಕರ್ ಕೊಡಲು ಡಿಕೆ ಶಿವಕುಮಾರ್ ಗೆ ಭರ್ಜರಿ ಅವಕಾಶವೊಂದು ಬಂದಿದೆ.
ಹೈಕಮಾಂಡ್ ನಾಯಕರು ಸಿದ್ದರಾಮಯ್ಯ ಪರ ನಿಲ್ಲಲು ಮುಖ್ಯ ಕಾರಣ ಅವರು ಅಹಿಂದ ನಾಯಕ ಎಂದು ಬಿಂಬಿತವಾಗಿರುವುದು. ಡಿಕೆ ಶಿವಕುಮಾರ್ ಸಿಎಂ ಆಗುವುದಕ್ಕೆ ದಲಿತ ನಾಯಕರಿಂದ ಆಕ್ಷೇಪವಿದೆ. ಇದೀಗ ಡಿಕೆಶಿಗೆ ಈಗ ಹಿಂದುಳಿದ ವರ್ಗದವರ ಬೆಂಬಲ ಪಡೆಯಲು ಒಳ್ಳೆಯ ಅವಕಾಶ ಎದುರಾಗಿದೆ.
ಅತಿ ಹಿಂದುಳಿದ ವರ್ಗಗಳ 11 ಸ್ವಾಮೀಜಿಗಳ ಒಕ್ಕೂಟ ನಿನ್ನೆ ಡಿಕೆ ಶಿವಕುಮಾರ್ ಅವರನ್ನು ಭೇಟಿಯಾಗಿ ನಿಮ್ಮ ನೇತೃತ್ವದಲ್ಲಿ ಅತಿ ಹಿಂದುಳಿದ ವರ್ಗದ ಸಮಾವೇಶ ಬೆಂಗಳೂರಿನಲ್ಲಿ ನಡೆಯಬೇಕು ಎಂದು ಬೇಡಿಕೆಯಿಟ್ಟಿದೆ.
ಹೀಗಾಗಿ ಈಗ ಡಿಕೆ ಶಿವಕುಮಾರ್ ಈ ಸ್ವಾಮೀಜಿಗಳ ಬೇಡಿಕೆಯಂತೆ ತಮ್ಮ ನೇತೃತ್ವದಲ್ಲಿ ಸಮಾವೇಶ ಮಾಡಿದರೆ ಅತಿ ಹಿಂದುಳಿದ ವರ್ಗದವರ ಬೆಂಬಲ ಪಡೆಯಲು ಸಾಧ್ಯವಾಗುತ್ತದೆ. ಇದು ಡಿಕೆ ಶಿವಕುಮಾರ್ ಗೆ ಪ್ಲಸ್ ಪಾಯಿಂಟ್ ಆಗಬಹುದು. ಇದನ್ನು ಅವರು ಬಳಸಿಕೊಳ್ಳುತ್ತಾರಾ ನೋಡಬೇಕಿದೆ.