Select Your Language

Notifications

webdunia
webdunia
webdunia
webdunia

ಇಂದಾದರೂ ಸಿಗುತ್ತಾ ಡಿಕೆಶಿಗೆ ಬಿಡುಗಡೆಯ ಭಾಗ್ಯ?

ಇಂದಾದರೂ ಸಿಗುತ್ತಾ ಡಿಕೆಶಿಗೆ ಬಿಡುಗಡೆಯ ಭಾಗ್ಯ?
ನವದೆಹಲಿ , ಬುಧವಾರ, 25 ಸೆಪ್ಟಂಬರ್ 2019 (09:08 IST)
ನವದೆಹಲಿ: ಅಕ್ರಮ ಹಣ ವರ್ಗಾವಣೆ ಆರೋಪದಲ್ಲಿ ಇಡಿಯಿಂದ ಬಂಧನಕ್ಕೊಳಗಾಗಿ ಜೈಲು ಸೇರಿರುವ ಶಾಸಕ ಡಿಕೆ ಶಿವಕುಮಾರ್ ಜಾಮೀನು ಅರ್ಜಿಯ ತೀರ್ಪು ಇಂದು ಹೊರಬೀಳಲಿದೆ.


ಈಗಾಗಲೇ 14 ದಿನಗಳ ನ್ಯಾಯಾಂಗ ಬಂಧನದಲ್ಲಿ ಕಳೆದಿರುವ ಡಿಕೆಶಿಯನ್ನು ಹೆಚ್ಚಿನ ವಿಚಾರಣೆಗೆ ತಮ್ಮ ವಶಕ್ಕೊಪ್ಪಿಸಬೇಕು ಎಂದು ಇಡಿ ಅಧಿಕಾರಿಗಳು ನ್ಯಾಯಾಲಯದ ಮುಂದೆ ಬೇಡಿಕೆಯಿಟ್ಟಿದ್ದಾರೆ. ಡಿಕೆಶಿ ಅಕ್ರಮವಾಗಿ 800 ಕೋಟಿ ರೂ. ಆಸ್ತಿ ಹೊಂದಿದ್ದಾರೆ ಎಂಬುದು ಇಡಿ ಅಧಿಕಾರಿಗಳ ವಾದವಾಗಿದೆ.

ಆದರೆ ಇದು ತಮ್ಮ ಪಿತ್ರಾರ್ಜಿತವಾಗಿ ಬಂದ ಆಸ್ತಿ. ಇದರಿಂದ ಬಂದ ಆದಾಯದಿಂದ ಆಸ್ತಿಯಲ್ಲಿ ಹೆಚ್ಚಳವಾಗಿದೆಯಷ್ಟೇ ಎಂಬುದು ಡಿಕೆಶಿ ವಾದವಾಗಿದೆ. ಅಷ್ಟೇ ಅಲ್ಲದೆ, ಡಿಕೆಶಿ ಆರೋಗ್ಯವೂ ಸರಿ ಇಲ್ಲದ ಕಾರಣ ಅವರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಬೇಕು ಎಂಬುದು ಡಿಕೆಶಿ ಪರ ವಕೀಲರ ವಾದವಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಪ್ರಧಾನಿ ಮೋದಿ, ಭದ್ರತಾ ಸಲಹೆಗಾರ ಅಜಿತ್ ದೋವಲ್ ಜೀವಕ್ಕೆ ಕುತ್ತು!