Webdunia - Bharat's app for daily news and videos

Install App

ಮೇಕೆದಾಟು ಯೋಜನೆಯನ್ನು ಸರ್ಕಾರ ಕೂಡಲೇ ಆರಂಭಿಸಬೇಕು-ಡಿ.ಕೆ.ಶಿವಕುಮಾರ್ ಒತ್ತಾಯ

Webdunia
ಸೋಮವಾರ, 5 ಜುಲೈ 2021 (20:31 IST)
ಮೇಕೆದಾಟು ಯೋಜನೆಯನ್ನು ಸರ್ಕಾರ ಕೂಡಲೇ ಆರಂಭಿಸಬೇಕು ಎಂದು ಮಂಗಳೂರಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಒತ್ತಾಯಿಸಿದ್ದಾರೆ. ಮಂಗಳೂರಿನ ಖಾಸಗಿ ಹೊಟೇಲ್ ನಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು,
ಮೇಕೆದಾಟು ಯೋಜನೆ ರಾಜ್ಯಕ್ಕೆ ಅತೀ ಮುಖ್ಯವಾದ ಯೋಜನೆ. ಈ ಹಿಂದೆ ನಾನು ಸಚಿವನಾಗಿದ್ದಾಗ ಕೂಡಾ ಈ ಯೋಜನೆ ಬಗ್ಗೆ ಕೇಂದ್ರಕ್ಕೆ ಮನವರಿಕೆ ಮಾಡಿದ್ದೆ. ಆವಾಗ ಕೇಂದ್ರ ಪರಿಸರ ಸಚಿವಾಲಯ ಒಪ್ಪಿಗೆ ‌ನೀಡಿತ್ತು. ನಮ್ಮ ಪಾಲಿನ ನೀರು ತಮಿಳುನಾಡು ಪಾಲಾಗೋಕೆ ಬಿಡಲ್ಲ. ಮೇಕೆದಾಟು ನನ್ನ ಕ್ಷೇತ್ರದಲ್ಲೇ ಇದೆ. ಮೂರು ವರ್ಷದೊಳಗೆ ಡ್ಯಾಂ ತಯಾರು ಮಾಡಿ ಬೆಂಗಳೂರಿಗೆ ನೀರು ಕೊಡಬೇಕು. ಡಿಪಿಆರ್ ಕೂಡಾ ಈಗಾಗಲೇ ತಯಾರಾಗಿದೆ. ಯಡಿಯೂರಪ್ಪನವರು ತಮಿಳುನಾಡು ಸರ್ಕಾರಕ್ಕೆ ಮನವಿ ಮಾಡುತ್ತಿದ್ದಾರೆ. ಕೇಂದ್ರ ಮತ್ತು ರಾಜ್ಯದಲ್ಲೇ ಒಂದೇ ಸರ್ಕಾರ ಬಂದ್ರೆ ಅಭಿವೃದ್ಧಿ ಸುಲಭ ಅಂತಾ ಹೇಳಿದ್ರಿ. ನಮ್ಮ ಪಕ್ಷದಿಂದಲೂ 14 ಜನರನ್ನು ಕರೆದಿಕೊಂಡ್ರಿ. ಈಗ ನೀವು ತಮಿಳುನಾಡು ಜೊತೆ ಭಿಕ್ಷೆ ಬಿಡೋದು ಸರಿಯಲ್ಲ ಎಂದ ಅವರು, ಯಡಿಯೂರಪ್ಪನವರಿಗೆ ರಾಜಕೀಯ ಬಧ್ಧತೆ ಇರಬೇಕು. ಕೂಡಲೇ ಟೆಂಟರ್ ಕರೆದು ಕೆಲಸ ಆರಂಭ ಮಾಡಬೇಕು. ನಮ್ಮ ಭೂಮಿ,ನಮ್ಮ ಹಣ, ನಮ್ಮ‌ ನೀರು. ಯಾರನ್ನೂ ಕೇಳಿ ಮಸಾಲೆ ಅರೆಯಬೇಕಾಗಿಲ್ಲ. ಕಾಮಗಾರಿಗೆ ಯಾರ ಅನುಮತಿಯೂ ಬೇಕಾಗಿಲ್ಲ ಎಂದರು. ಮೀನುಗಾರಿಕೆ ಇಲ್ಲದಿದ್ದರೆ ಮಂಗಳೂರಿಗೆ ಬೆಲೆ ಇಲ್ಲ. ಆರ್ಥಿಕ ಚಟುವಟಿಕೆಗೆ ಕಾರಣವೇ ಮೀನುಗಾರಿಕೆ. ಮೀನುಗಾರರನ್ನು ಅಸಂಘಟಿತ ಕಾರ್ಮಿಕ ವಲಯಕ್ಕೆ ಸೇರಿಸಿಲ್ಲ. ಮೀನುಗಾರರಿಗೆ ಸರ್ಕಾರ ಪರಿಹಾರ ವನ್ನು ನೀಡಿಲ್ಲ. ಯಾವುದೇ ಸಬ್ಸಿಡಿಯನ್ನೂ ಮೀನುಗಾರರಿಗೆ ನೀಡಿಲ್ಲ. ಮೀನುಗಾರರಿಗೆ ಸಾಲ ನೀಡುವ ವ್ಯವಸ್ಥೆಯನ್ನೂ ಮಾಡಿಲ್ಲ. ಮೀನುಗಾರರ ಸಾಲಕ್ಕೆ ಸರ್ಕಾರವೇ ಜಾಮೀನು ಹಾಕಬೇಕು
ಎಂದರು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ವೀರೇಂದ್ರ ಪಪ್ಪಿಗೆ ತಪ್ಪದ ಇಡಿ ಕಸ್ಟಡಿ: ಅಧಿಕಾರಿಗಳಿಗೆ ಹಲವು ಷರತ್ತು ವಿಧಿಸಿದ ಕೋರ್ಟ್‌

ಕೇರಳದಲ್ಲಿ ಮಿದುಳು ತಿನ್ನುವ ಅಮೀಬಾ ಪತ್ತೆ, ಇದುವರೆಗೆ 41 ಪ್ರಕರಣ ದಾಖಲು

Video: ತಲಪಾಡಿಯಲ್ಲಿ ಕೆಎಸ್ ಆರ್ ಟಿಸಿ ಬಸ್ ದುರಂತ: ಆರು ಮಂದಿ ಸಾವು

ಶಿವಕುಮಾರ್ ತಮ್ಮ ಹೇಳಿಕೆಯನ್ನು ತಕ್ಷಣ ಹಿಂಪಡೆಯಲಿ: ವಿಜಯೇಂದ್ರ ಆಗ್ರಹ

ಮತದಾರರ ಅಧಿಕಾರ ಯಾತ್ರೆಯಲ್ಲಿ ಮೋದಿ ತಾಯಿಯ ವಿರುದ್ಧ ಅವಾಚ್ಯ ಶಬ್ದ: ಬಿಜೆಪಿ ಆರೋಪ

ಮುಂದಿನ ಸುದ್ದಿ
Show comments