Publish Date: Sun, 06 Aug 2023 (15:41 IST)
Updated Date: Sun, 06 Aug 2023 (15:07 IST)
ಲೋಕಸಭಾ ಚುನಾವಣೆ ಸಂಬಂಧಿಸಿದಂತೆ ನಮ್ಮ ಕೆಲಸ ಪ್ರಾರಂಭ ಆಗಬೇಕಿದೆ ಎಂದು ಬೆಂಗಳೂರಿನ ಸದಾಶಿವನಗರದ ನಿವಾಸದಲ್ಲಿ ಡಿಸಿಎಂ ಶಿವಕುಮಾರ್ ಪ್ರತಿಕ್ರಿಯಿಸಿದ್ದು,ನಾಳೆ ನಾನು ಸಿಎಂ ಕೆಲವು ಜಿಲ್ಲೆಯ ನಾಯಕರ ಸಭೆ ಮಾಡ್ತಿದ್ದೇವೆ .ವಿವಿಧ ಸಮುದಾಯದ ನಾಯಕರನ್ನ ಭೇಟಿ ಆಗಬೇಕಿದೆ .ಮೈನಾರಿಟಿ ನಾಯಕರ ಸಭೆ ಮಧ್ಯಾಹ್ನ ಇದೆ , ನಂತರ ಮಾತಾಡುವೆ ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಆರೋಪಕ್ಕೆ ಡಿಕೆಶಿ ತಿರುಗೇಟು ನೀಡಿದ್ದಾರೆ.
ಅಲ್ಲದೇ ಇರಲಿ, ಬರಿ ನಿಮ್ಮ ಹತ್ರ ಮಾತಾಡಿದ್ರೆ ಸಾಲದು.ಪಾಪ..... ಪ್ರೈಮ್ ಮಿನಿಸ್ಟರ್ ವರೆಗೂ ಮಾತಾಡಿದ್ದಾರೆ .ತಕ್ಕಂತೆ ಉತ್ತರ ಕೊಡಬೇಕಲ್ಲಾ ಕೊಡ್ತೇನೆ ಎಂದು ಮಾಜಿ ಸಿಎಂ ಸವಾಲನ್ನ ಡಿಕೆ ಶಿವಕುಮಾರ್ ಸ್ವೀಕರಿಸಿದ್ದಾರೆ.