Webdunia - Bharat's app for daily news and videos

Install App

ಮತ ಎಣಿಕೆಗೆ ಸಕಲ ಸಿದ್ಥತೆ ಕೈಗೊಂಡ ಜಿಲ್ಲಾಡಳಿತ

Webdunia
ಸೋಮವಾರ, 5 ನವೆಂಬರ್ 2018 (19:27 IST)
ಜಮಖಂಡಿ ವಿಧಾನಸಭೆ ಉಪಚುನಾವಣೆಯ ಫಲಿತಾಂಶ ನ.12ರಂದು ಹೊರ ಬೀಳಲಿದ್ದು, ಬಾಗಲಕೋಟೆ ಜಿಲ್ಲಾಡಳಿತ ಸಲಕ‌ಸಿದ್ದತೆಗಳನ್ನ ಮಾಡಿಕೊಂಡಿದೆ.

ಜಮಖಂಡಿ ನಗರದ ಮಿನಿವಿಧಾನಸೌಧದಲ್ಲಿ ಮತ ಎಣಿಕೆ ನಡೆಯಲಿದ್ದು, ಚುನವಣಾ ಅಧಿಕಾರಿಗಳು  ಮತ ಎಣಿಕೆಗೆ ಬೇಕಾದ ವ್ಯವಸ್ಥೆಗಳನ್ನ ಮಾಡಿಕೊಂಡಿದ್ದಾರೆ. ಈ ಕುರಿತು ಮಾಹಿತಿ‌ ನೀಡಿರುವ ಬಾಗಲಕೋಟೆ‌ ಜಿಲ್ಲಾಧಿಕಾರಿ ಕೆ.ಜೆ.ಶಾಂತಾರಾಂ,  ಮತ ಎಣಿಕೆಗೆ 14 ಟೇಬಲ್ಗಳ ವ್ಯವಸ್ಥೆಯನ್ನ ಮಾಡಿಕೊಂಡಿದ್ದು, ಒಂದು ಟೇಬಲಗೆ ಮೂರುಜನ ಚುನಾವಣಾ ಸಿಬ್ಬಂದಿಯನ್ನ ನೇಮಿಸಲಾಗಿದೆ. ಏಜೆಂಟರುಗಳಿಗೆ, ಪಕ್ಷದ ಮುಖಂಡರುಗಳಿಗೆ, ಅಭ್ಯರ್ಥಿಗಳಿಗೆ ಕೂರಲು ಪ್ರತ್ಯೇಕ ಆಸನದ ವ್ಯವಸ್ಥೆ ಮಾಡಲಾಗಿದೆ.

ಇನ್ನು  ಜಿಲ್ಲಾ ಪೊಲೀಸ್ ಇಲಾಖೆ ಕೂಡ ಭದ್ರತೆ ದೃಷ್ಠಿಯಿಂದ ಈಗಾಗಲೆ ಸಕಲ ಸಿದ್ಧತೆ ಮಾಡಿಕೊಂಡಿದೆ. ಈ ಕುರಿತು ಮಾಹಿತಿ ನೀಡಿರುವ ಬಾಗಲಕೋಟೆ ಎಸ್ ಪಿ ಸಿ.ಬಿ.ರಿಷ್ಯಂತ್, ಮತ ಎಣಿಕೆ ಕೇಂದ್ರದ 50 ಮೀಟರ್ ಹೊರಗಡೆ ಬ್ಯಾರಿಗೇಡ್ ಗಳನ್ನು ಹಾಕಲಾಗುತ್ತೆ. 50 ಮೀಟರ್ ಒಳಗಡೆ ಯಾರಿಗೂ ಪ್ರವೇಶ ಇರೋದಿಲ್ಲ. ಪೊಲೀಸ್, ಚುನಾವಣಾ ಸಿಬ್ಬಂದಿ ಹಾಗೂ ಎಜೆಂಟರ್ ಗಳಿಗೆ ಮಾತ್ರ 50ಮೀಟರ್ ಒಳಗೆ ಪ್ರವೇಶಕ್ಕೆ ಅವಕಾಶ ಇದೆ ಅಂತಾ ತಿಳಿಸಿದ್ದಾರೆ.

 ಇನ್ನು ಕೆಎಸ್ ಆರ್ ಪಿ, ಡಿಎಆರ್, ಸಿಐಎಸ್ಎಫ್ ಹಾಗೂ ಪೊಲೀಸ್ ಇಲಾಖೆಯವ್ರು ಸೇರಿ ಅಂದಾಜು 500ಕ್ಕೂ ಹೆಚ್ಚು ಸಿಬ್ಬಂದಿಗಳನ್ನು ನಿಯೋಜನೆ ಮಾಡಲಾಗಿದೆ. ಫಲಿತಾಂಶದ ಬಳಿಕ ಗೊಂದಲ ಉಂಟಾಗುವ ಜಮಖಂಡಿ ನಗರದ ಸೂಕ್ಷ್ಮ ಪ್ರದೇಶಗಳಲ್ಲಿ ಈಗಾಗಲೇ ಬಿಗಿ ಬಂದೋಬಸ್ತ್ ಗೆ ಕ್ರಮ ಕೈಗೊಳ್ಳಲಾಗಿದೆ. ಜೊತೆಗೆ ಗಲಾಟೆ ಸಂಭವಿಸಬಹುದಾದಂತಹ ಗ್ರಾಮಗಳಲ್ಲೂ ಈಗಾಗಲೇ ಭದ್ರತಾ ಸಿಬ್ಬಂದಿಗಳನ್ನು ನಿಯೋಜನೆ ಮಾಡಿದ್ದೇವೆ. 48 ಗಂಟೆಗಳ ಕಾಲ ಕ್ಷೇತ್ರದಾದ್ಯಂತ ಮಧ್ಯ ನಿಷೇಧ ಕೂಡಾ ಮಾಡಲಾಗಿದೆ ಎಂದು ತಿಳಿಸಿದ್ದಾರೆ.


ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments