Select Your Language

Notifications

webdunia
webdunia
webdunia
webdunia

ಇಂದು ಶಿರಡಿ ಹಾಗೂ ಔರಂಗಾಬಾದ್‍ಗಳಿಗೆ ಪ್ರಯಾಣ ಬೆಳೆಸಲಿರುವ ಅತೃಪ್ತ ಶಾಸಕರು

ಇಂದು ಶಿರಡಿ ಹಾಗೂ ಔರಂಗಾಬಾದ್‍ಗಳಿಗೆ ಪ್ರಯಾಣ ಬೆಳೆಸಲಿರುವ ಅತೃಪ್ತ ಶಾಸಕರು
ಮುಂಬೈ , ಶನಿವಾರ, 13 ಜುಲೈ 2019 (07:25 IST)
ಮುಂಬೈ : ರಾಜೀನಾಮೆ ನೀಡಿ ಮುಂಬೈ ರೆಸಾರ್ಟ್ ನಲ್ಲಿ ವಾಸ್ತವ್ಯ ಹೂಡಿದ ಮೈತ್ರಿ ಸರ್ಕಾರದ ಅತೃಪ್ತ ಶಾಸಕರು ಇಂದು ಶಾಸಕರು ಶಿರಡಿ ಹಾಗೂ ಔರಂಗಾಬಾದ್‍ ಗಳಿಗೆ ಭೇಟಿ ನೀಡಲಿದ್ದಾರೆ ಎಂಬುದಾಗಿ ತಿಳಿದುಬಂದಿದೆ.



ಶನಿವಾರ ಬೆಳಗ್ಗೆ 7.30ಕ್ಕೆ ವಿಶೇಷ ವಿಮಾನದ ಮೂಲಕ ಶಿರಡಿಗೆ ಹೋಗಲಿರುವ ಅತೃಪ್ತರು ಶಿರಡಿ ಸಾಯಿಬಾಬಾ ದರ್ಶನ ಪಡೆಯಲಿದ್ದಾರೆ. ಬಳಿಕ ಶನಿಸಿಂಗಾನಪುರಲ್ಲಿ ಶನೀಶ್ವರನ ದರ್ಶನ ಮುಗಿಸಿ ಅಲ್ಲಿಂದ ಔರಂಗಾಬಾದ್‍ಗೆ  ತೆರಳಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ.


ನಂತರ ಮಹಾರಾಷ್ಟ್ರದ ಐತಿಹಾಸಿ ಪ್ರವಾಸಿ ತಾಣಗಳಾದ ಅಜಂತಾ, ಎಲ್ಲೋರಾ ಗುಹೆಗಳನ್ನು ವೀಕ್ಷಣೆ ಮಾಡಿ ಶನಿವಾರ ರಾತ್ರಿ ಔರಂಗಾಬಾದ್‍ನಲ್ಲಿಯೇ ಇದ್ದು, ಭಾನುವಾರ ನಾಸಿಕ್‍ನ ತ್ರ್ಯಂಬಕೇಶ್ವರ ದೇವಸ್ಥಾನ ದರ್ಶನ ಮಾಡಿ ವಿಶೇಷ ಪೂಜೆ ಸಲ್ಲಿಸಿ, ಸಂಜೆ ಮುಂಬೈಗೆ ವಾಪಸ್ ಆಗಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಕರ್ನಾಟಕದಲ್ಲಿ ದೋಸ್ತಿ ಸರಕಾರವನ್ನು ಅಲುಗಾಡಿಸಲು ಬಿಜೆಪಿಯಿಂದಾಗದು- ರಾಹುಲ್ ಗಾಂಧಿ ಸ್ಪಷ್ಟನೆ