Select Your Language

Notifications

webdunia
webdunia
webdunia
webdunia

ಬೆಂಗಳೂರು: ಯಡವಟ್ಟಿನಿಂದ ಚಿನ್ನದ ಸರ ಸಮೇತ ಗಣೇಶನ ವಿಸರ್ಜನೆ

ಬೆಂಗಳೂರು: ಯಡವಟ್ಟಿನಿಂದ ಚಿನ್ನದ ಸರ ಸಮೇತ ಗಣೇಶನ ವಿಸರ್ಜನೆ

Sampriya

ಬೆಂಗಳೂರು , ಸೋಮವಾರ, 9 ಸೆಪ್ಟಂಬರ್ 2024 (17:11 IST)
Photo Courtesy X
ಬೆಂಗಳೂರು: ರಾಜ್ಯದಾದ್ಯಂತ ಗಣೇಶ ಚತುರ್ಥಿ ಹಬ್ಬವನ್ನು ಅದ್ಧೂರಿಯಾಗಿ ಆಚರಿಸಲಾಯಿತು. ಮೂರ್ತಿ ಪ್ರತಿಷ್ಠಾಪನೆ ಮಾಡಿ ಸಂಭ್ರಮದಿಂದ ವಿಘ್ನ ವಿನಾಶಕನ ಆರಾಧನೆ ಮಾಡಲಾಯಿತು.

ಈ ಸಂದರ್ಭದಲ್ಲಿ ಗಣೇಶನ ಮೂರ್ತಿಗೆ 60 ಗ್ರಾಂ ಚಿನ್ನದ ಸರ ಹಾಕಿ ಪೂಜೆ ಬಳಿಕ ಚಿನ್ನದ ಸರದ ಸಮೇತ ಗಣೇಶ ಮೂರ್ತಿಯನ್ನು ವಿಸರ್ಜನೆ ಮಾಡಿದ ಘಟನೆ ನಗರದಲ್ಲಿ ನಡೆದಿದೆ.

ಅಚ್ಚರಿ ಏನೆಂದರೆ ರಾತ್ರಿ ಮಲಗುವ ವೇಳೇ ಚಿನ್ನದ ಸಮೇತ ಮೂರ್ತಿ ವಿಸರ್ಜನೆ ಮಾಡಿರುವುದಾಗಿ ನೆನಪಿಗೆ ಬಂದಿದೆ. ಕೂಡಲೇ ಮೂರ್ತಿ ವಿಸರ್ಜನೆ ಮಾಡಿದ ಸ್ಥಳದಲ್ಲೇ ಸ್ಥಳೀಯರು ಚಿನ್ನದ ಸರಕ್ಕೆ ಹುಡುಕಾಟ ನಡೆಸಿದ್ದಾರೆ.

ಇಂದು ಬೆಳಗ್ಗಿನ ಜಾವ ಚಿನ್ನದ ಸರ, ವಿಸರ್ಜನೆ ಮಾಡಿದ ಸ್ಥಳದಲ್ಲೇ ಸಿಕ್ಕಿದೆ. ಸರ ನೋಡಿದ ಮನೆಯವರು ನಿಟ್ಟುಸಿರು ಬಿಟ್ಟಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ರಾಷ್ಟ್ರ ರಾಜಧಾನಿಯಲ್ಲಿ ಜ.1ರ ವರೆಗೆ ಪಟಾಕಿ ಮಾರಾಟ, ಉತ್ಪಾದನೆ ನಿಷೇಧ