Select Your Language

Notifications

webdunia
webdunia
webdunia
webdunia

ಚರ್ಚ್‌ನ ಬಿಷಪ್ ಆ ಮಹಿಳೆಗೆ ಮಾಡಿದ್ದೇನು ಗೊತ್ತಾ?

ಚರ್ಚ್‌ನ ಬಿಷಪ್ ಆ ಮಹಿಳೆಗೆ ಮಾಡಿದ್ದೇನು ಗೊತ್ತಾ?
ಬೆಂಗಳೂರು , ಶನಿವಾರ, 2 ಫೆಬ್ರವರಿ 2019 (15:34 IST)
ಲೈಂಗಿಕ ದೌರ್ಜನ್ಯ ನನ್ನ ಮೇಲೆ ಚರ್ಚ್​ನ ಬಿಷಪ್ ನಡೆಸಿದ್ದಾರೆ ಎಂದು ಆರೋಪ ಕೇಳಿಬಂದಿದ್ದು, ಸಂತ್ರಸ್ಥ ಮಹಿಳೆ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ನಡೆದಿದೆ.

ಚರ್ಚ್ ಬಿಷಪ್ ತನ್ನ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿರುವುದಾಗಿ ಆರೋಪಿಸಿ ಅವಮಾನ ತಾಳಲಾರದೆ ಮಹಿಳೆಯೊಬ್ಬಳು ಆತ್ಮಹತ್ಯೆಗೆ ಯತ್ನಿಸಿದ್ದು, ಸಂಬಂಧ ಬೆಂಗಳೂರಿನ ಶಿವಾಜಿನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಸೆಂಟ್ರಲ್ ಬಿಷಪ್ ಪಿ.ಕೆ.ಸಾಮ್ಯುಯಲ್ ಮೇಲೆ ಲೈಂಗಿಕ ದೌರ್ಜನ್ಯ ಆರೋಪ ಮಾಡಿ ಶಿವಾಜಿ ನಗರ ಪೊಲೀಸರಿಗೆ ದೂರು ನೀಡಿರುವ ಮಹಿಳೆಯು, ದೂರು ಹಿಂಪಡೆಯುವಂತೆ ಸ್ಯಾಮುಯೆಲ್ ಆಪ್ತ ವಿನೋದ್ ದಾಸ್ ಧಮ್ಕಿ ಹಾಕಿದ್ದಾನೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಚರ್ಚ್ ಆಫ್ ಸೌತ್ ಇಂಡಿಯಾ ಆಸ್ಪತ್ರೆಯಲ್ಲಿ ಮಹಿಳೆ ಕೆಲಸ ಮಾಡುತ್ತಿದ್ದು, ಪ್ರಕರಣ ಹಿಂಪಡೆಯಲು ವಿನೋದ್ ದಾಸ್ ರಾಜಿ ಸಂಧಾನಕ್ಕಾಗಿ ಬಿಷಪ್ ಬಳಿ ಕರೆದುಕೊಂಡು ಹೋಗಿದ್ದನಂತೆ. ವೇಳೆ ಬಿಷಪ್ ದೂರು ವಾಪಸ್ ಪಡೆಯಲು ಒತ್ತಾಯಿಸಿದ್ದಾರೆ. ಅಲ್ಲದೆ ಒಂದು ಕೋಟಿ ನೀಡುವುದಾಗಿ ಆಫರ್ ನೀಡಿ ಮಹಿಳೆ ಮೇಲೆ ಕೈ ಹಾಕಿ ಅಸಭ್ಯ ವರ್ತನೆ ಮಾಡಿದ್ದಾರೆ. ಇದಕ್ಕೆ ಪ್ರತಿರೋಧಿಸಿದಾಗ ಕೊಲೆ ಬೆದರಿಕೆ ಹಾಕಿರುವುದಾಗಿ ಸಂತ್ರಸ್ತೆ ಆರೋಪಿಸಿದ್ದಾರೆ.

ತನಗಾದ ಅವಮಾನದಿಂದ ಕ್ರಿಮಿನಾಶಕ ಕುಡಿದು ಮಹಿಳೆ ಆತ್ಮಹತ್ಯೆಗೆ ಮಾಡಿಕೊಳ್ಳಲು ಪ್ರಯತ್ನ ನಡೆಸಿದ್ದು, ಸದ್ಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಬಿಷಪ್ ಸ್ಯಾಮುಯೆಲ್ ಮೇಲೆ ಹಿಂದೆ ಫೋಕ್ಸೋ, ಲೈಂಗಿಕ ದೌರ್ಜನ್ಯ, ಧಮ್ಕಿ, ಭೂ ಕಬಳಿಕೆ ಸೇರಿದಂತೆ ಹಲವು ಕೇಸ್ ಇದೆ. ಸದ್ಯ ಬಿಷಪ್ ಪಿ.ಕೆ.ಸ್ಯಾಮ್ಯುಯೆಲ್ ಮತ್ತು ವಿನೋದ್ ದಾಸ್ ಮೇಲೆ ಪ್ರಕರಣ ದಾಖಲಾಗಿದ್ದು, ಶಿವಾಜಿನಗರ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.



Share this Story:

Follow Webdunia kannada

ಮುಂದಿನ ಸುದ್ದಿ

ರಾಜಕೀಯಕ್ಕೆ ನಿಖಿಲ್ ಕುಮಾರ್: ಮತದಾರರಿಗೆ ಉಚಿತ ಟಿಕೆಟ್