Daily Horoscope

Select Your Language

Notifications

webdunia
webdunia
webdunia
webdunia

ಸಿದ್ದರಾಮಯ್ಯ ಮಹಿಳೆ ಜತೆ ಅಸಭ್ಯ ವರ್ತನೆಗೆ ರಾಮುಲು ಗರಂ

ಸಿದ್ದರಾಮಯ್ಯ
ಮಾಜಿ ಸಿಎಂ ಸಿದ್ದರಾಮಯ್ಯ ಮಹಿಳೆಯೊಂದಿಗೆ ಅಸಭ್ಯ ವರ್ತನೆ ತೋರಿರುವ ಘಟನೆಗೆ ಬಿಜೆಪಿಯ ಶ್ರೀ ರಾಮುಲು ಗರಂ ಆಗಿದ್ದಾರೆ. ಸಿದ್ದರಾಮಯ್ಯ ಸಂಸ್ಕಾರವಿಲ್ಲದ ವ್ಯಕ್ತಿ ಎಂದು ದೂರಿದ್ದಾರೆ.

ಮೊಳಕಾಲ್ಮೂರು ಶಾಸಕ ಶ್ರೀರಾಮುಲು ಹೇಳಿಕೆ ನೀಡಿದ್ದು, ಚಿತ್ರದುರ್ಗದಲ್ಲಿ ಜಿಪಂ ತ್ರೈಮಾಸಿಕ ಸಭೆಯಲ್ಲಿ ಭಾಗಿಯಾಗುವ ಮುನ್ನ ಮಾತನಾಡಿ, ರಾವಣಾಸುರನಲ್ಲಿರೋ ಎಲ್ಲಾ ಗುಣಗಳು ಸಿದ್ದರಾಮಯ್ಯನ ಬಳಿ ಇವೆ. ‌

ಹತ್ತಿರದಿಂದ ನೋಡಿದವರು ಯಾರು ಸಿದ್ದರಾಮಯ್ಯನ್ನ ಒಪ್ಕೊಳ್ಳುವ ಪ್ರಶ್ನೆಯಿಲ್ಲ. ಮಹಿಳೆಯರ ಮೇಲೆ ಗೌರವ, ಪ್ರಮಾಣಿಕತೆ ತೋರುವ ನಡುವಳಿಕೆಯ ವ್ಯಕ್ತಿತ್ವ ಅವರಲ್ಲಿ ಇಲ್ಲ ಎಂದಿದ್ದಾರೆ.

ಇನ್ನು ಸಿಎಂ ರಾಜಿನಾಮೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿರುವ ಶ್ರೀರಾಮುಲು, ಸಮ್ಮಿಶ್ರ ಸರ್ಕಾರ ಅಳಿವಿನ ಅಂಚಿನಲ್ಲಿದೆ.  ಸರ್ಕಾರದ ಕೊನೆಯ ಕ್ಷಣಗಳನ್ನು ನೋಡುತಿದ್ದೇವೆ. ಸರ್ಕಾರದಲ್ಲಿ ಕುಮಾರಸ್ವಾಮಿಯವರನ್ನು ಸಿಎಂ ಎಂದು ಭಾವಿಸಿಲ್ಲ.  
ಕಾಂಗ್ರೆಸ್ಸಿಗರಿಗೆ ಸಿದ್ದರಾಮಯ್ಯನೇ ಸಿಎಂ ಆಗಿದ್ದಾರೆ ಎಂದರು.




Share this Story:

Follow Webdunia kannada

ಮುಂದಿನ ಸುದ್ದಿ

ಮತ್ತೆ ಶುರುವಾಗಿದೆಯಾ ಕಾಂಗ್ರೆಸ್ ಜಟಾಪಟಿ?