Select Your Language

Notifications

webdunia
webdunia
webdunia
webdunia

ನಡೆದಾಡುವ ದೇವರ ಮೇಲಿನ ಭಕ್ತಿ: ಊರಿನ ಹೆಸರನ್ನೇ ಬದಲಿಸಿದ ಗ್ರಾಮಸ್ಥರು!

ನಡೆದಾಡುವ ದೇವರ ಮೇಲಿನ ಭಕ್ತಿ: ಊರಿನ ಹೆಸರನ್ನೇ ಬದಲಿಸಿದ ಗ್ರಾಮಸ್ಥರು!
ಚಾಮರಾಜನಗರ , ಬುಧವಾರ, 23 ಜನವರಿ 2019 (19:13 IST)
ಸಿದ್ಧಗಂಗಾ ಶ್ರೀಗಳ ಕಾಯಕ ತಪಸ್ಸು, ಸೇವೆಗೆ ಭಕ್ತಿಪೂರ್ವಕವಾಗಿ ಆ ಊರಿನ ಜನರು ತಮ್ಮ ಗ್ರಾಮದ ಹೆಸರನ್ನೇ ಬದಲಾಯಿಸಿಕೊಂಡಿದ್ದಾರೆ.

ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆಗೂ ಡಾ. ಶಿವಕುಮಾರ ಸ್ವಾಮೀಜಿಗೂ ಅವಿನಾಭಾವ ನಂಟು. ಅವರು ಹಲವು ಬಾರಿ ತಾಲೂಕಿಗೆ ಭೇಟಿ ನೀಡಿದ್ದಲ್ಲದೇ ಜಿಲ್ಲೆಯಲ್ಲಿ ಅಪಾರ ಭಕ್ತಗಣ ಹೊಂದಿದ್ದಾರೆ.

ತಾಲೂಕಿನ ಕಾಡಂಚಿನ ಗ್ರಾಮವಾದ ಕುರುಬರಹುಂಡಿ ಗ್ರಾಮಸ್ಥರು ಸಿದ್ಧಗಂಗಾ ಶ್ರೀಗಳ ಕಾಯಕ ತಪಸ್ಸು, ಸೇವೆಗೆ ಭಕ್ತಿಪೂರ್ವಕವಾಗಿ ತಮ್ಮ ಗ್ರಾಮದ ಹೆಸರನ್ನೇ 2008ರಲ್ಲಿ ಬದಲಿಸಲಾಗಿತ್ತು. ಅಂದು ಕುರುಬರಹುಂಡಿ ಎಂದಿದ್ದ ಗ್ರಾಮ 11 ವರ್ಷಗಳಿಂದ ಶಿವಕುಮಾರಪುರ ಎಂದು ಬದಲಾಗಿದೆ. 

ಸಿದ್ಧಗಂಗಾ ಮಠಾಧೀಶ ಡಾ.ಶಿವಕುಮಾರ ಸ್ವಾಮೀಜಿ ಪ್ರಭಾವಕ್ಕೆ ಒಳಗಾಗಿ ತಾಲೂಕಿನ ಕಾಡಂಚಿನ ಕುರುಬರಹುಂಡಿ ಜನ ಊರಿನ ಹೆಸರನ್ನೇ ಬದಲಿಸಿದ್ದು ಅವರ ಮೇಲಿನ ಗೌರವಕ್ಕೆ ಸಾಕ್ಷಿಯಾಗಿದೆ. 

800-1000 ಜನಸಂಖ್ಯೆ ಇರುವ ಕುರುಬರಹುಂಡಿಯಲ್ಲಿ ವಿವಿಧ ಕೋಮಿನವರು ಸೌಹಾರ್ಧಯುತವಾಗಿ ಜೀವಿಸುತ್ತಿದ್ದಾರೆ. 2008 ರಲ್ಲಿ ಗ್ರಾಮಸ್ಥರು ತಮ್ಮ ಊರಿನ ಹೆಸರು ಬದಲಿಸುವ ನಿರ್ಣಯ ಕೈಗೊಂಡು ಅದರಂತೆ ಶಿವಕುಮಾರಪುರ ಎಂದು ಮರುನಾಮಕರಣ ಮಾಡಿದ್ದರು.

ನಾಮಫಲಕದಲ್ಲಿ ಶಿವಕುಮಾರಪುರ ಎಂದು ಬರೆಸುವ ಜೊತೆಗೆ ಸಿದ್ಧಗಂಗಾಶ್ರೀಗಳ ಫೋಟೋವನ್ನು ಹಾಕಿ ನಡೆದಾಡುವ ದೇವರಿಗೆ ಭಕ್ತಿ ಸಮರ್ಪಿಸಿದ್ದಾರೆ.

ಇನ್ನು ಗ್ರಾಮದ ಮರುನಾಮಕರಣದ ಸಮಾರಂಭದಲ್ಲಿ ಸಿದ್ಧಗಂಗಾ ಮಠದ ಕಿರಿಯಶ್ರೀ, ಅಂದಿನ ಶಾಸಕ ಹೆಚ್.ಎಸ್. ಮಹದೇವಪ್ರಸಾದ್ ಭಾಗವಹಿಸಿದ್ದರು.

 ಹಲವು ಬಾರಿ ಭೇಟಿ : 

ತಾಲೂಕಿಗೆ ಹಲವಾರು ಬಾರಿ ಭೇಟಿ ನೀಡಿದ್ದ ಸಿದ್ಧಗಂಗಾಶ್ರೀ ಹೆಚ್.ಎಸ್. ಮಹದೇವಪ್ರಸಾದ್ ಕುಟುಂಬ ಶ್ರೀಮಠದೊಂದಿಗೆ ಉತ್ತಮ ಬಾಂಧವ್ಯ ಹೊಂದಿದೆ. ಹಾಲಹಳ್ಳಿಯಲ್ಲಿ ಹೆಚ್.ಎನ್. ಶ್ರೀಕಂಠಶೆಟ್ಟಿ ನಿಧನ ಬಳಿಕ ಶೆಟ್ಟರ ಪ್ರತಿಮೆ ಅನಾವರಣ ಮಾಡಿದ್ದರು. ಶ್ರೀಗಳು ಹಂಗಳ, ದೇವರಹಳ್ಳಿ, ಬೇಗೂರಿಗೆ ಪಾದಪೂಜೆಗೆ ಬಂದಿದ್ದು ಈಗ ನೆನಪು ಮಾತ್ರ.




Share this Story:

Follow Webdunia kannada

ಮುಂದಿನ ಸುದ್ದಿ

ಕೈ ಸಚಿವರ ರಾಜೀನಾಮೆ ವಿಷಯ: ಸಚಿವ ಹೇಳಿದ್ದೇನು?