Select Your Language

Notifications

webdunia
webdunia
webdunia
webdunia

ಕೇಂದ್ರಕ್ಕೆ, ಸುಪ್ರೀಂಕೋರ್ಟ್ ಗೆ ಬೈಬೇಡ ಎಂದು ಕುಮಾರಸ್ವಾಮಿಗೆ ದೇವೇಗೌಡರು ಸಲಹೆ ಕೊಟ್ಟಿದ್ದೇಕೆ ಗೊತ್ತಾ?

ಕೇಂದ್ರಕ್ಕೆ, ಸುಪ್ರೀಂಕೋರ್ಟ್ ಗೆ ಬೈಬೇಡ ಎಂದು ಕುಮಾರಸ್ವಾಮಿಗೆ ದೇವೇಗೌಡರು ಸಲಹೆ ಕೊಟ್ಟಿದ್ದೇಕೆ ಗೊತ್ತಾ?
ಬೆಂಗಳೂರು , ಸೋಮವಾರ, 25 ಜೂನ್ 2018 (10:56 IST)
ಬೆಂಗಳೂರು: ಕಾವೇರಿ ಪ್ರಾಧಿಕಾರ ವಿಚಾರದಲ್ಲಿ ಕೇಂದ್ರ ಸರ್ಕಾರದ ನೀತಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದ ಸಿಎಂ ಕುಮಾರಸ್ವಾಮಿಗೆ ತಂದೆ, ಜೆಡಿಎಸ್ ವರಿಷ್ಠ ದೇವೇಗೌಡರು ಅಂಕುಶ ಹಾಕಿದ್ದಾರೆ.

ಕಾವೇರಿ ವಿಚಾರದಲ್ಲಿ ಕೇಂದ್ರ ಸರ್ಕಾರ ಅಥವಾ ಸುಪ್ರೀಂ ಕೋರ್ಟ್ ವಿರುದ್ಧ ಹೇಳಿಕೆ ಕೊಡಬೇಡ ಎಂದು ಪುತ್ರನಿಗೆ ದೇವೇಗೌಡರು ತಿಳಿಹೇಳಿದ್ದಾರೆ. ಕಾವೇರಿ ವಿಚಾರದಲ್ಲಿ ಮತ್ತೆ ಕಾನೂನು ಹೋರಾಟ ನಡೆಸಬೇಕಾಗಬಹುದು ಎಂದು ಕುಮಾರಸ್ವಾಮಿ ಹೇಳಿಕೆ ನೀಡಿದ ಬೆನ್ನಲ್ಲೇ ದೇವೇಗೌಡರು ತಮ್ಮ ಪುತ್ರನನ್ನು ಮನೆಗೆ ಕರೆಸಿ ಬುದ್ಧಿ ಹೇಳಿದ್ದಾರೆ.

ನದಿ ವಿವಾದದ ಬಗ್ಗೆ ದೇವೇಗೌಡರ ತಿಳುವಳಿಕೆ ಬಗ್ಗೆ ಈ ಮೊದಲು ಪ್ರಧಾನಿ ಮೋದಿ ಹಾಡಿ ಹೊಗಳಿದ್ದರು. ಅದರ ಬೆನ್ನಲ್ಲೇ ದೇವೇಗೌಡರೂ ಕೇಂದ್ರದ ವಿರುದ್ಧ ಹೇಳಿಕೆ ನೀಡದಿರಲು ಪುತ್ರನಿಗೆ ಸಲಹೆ ಕೊಟ್ಟಿರುವುದು ಕುತೂಹಲಕಾರಿಯಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಮಾಜಿ ಪ್ರಧಾನಿ ವಾಜಪೇಯಿಗಾಗಿ ಏಮ್ಸ್ ಗೆ ಬಂದ ಪ್ರಧಾನಿ ಮೋದಿ