Publish Date: Tue, 23 Jan 2018 (07:22 IST)
Updated Date: Tue, 23 Jan 2018 (07:27 IST)
ದಾವಣಗೆರೆ : ಸಾಹಿತಿ ದೇವನೂರು ಮಹದೇವ್ ಅವರು ಪ್ರಧಾನಿ ಮೋದಿ ಹಾಗು ಕಾಂಗ್ರೆಸ್ ಪಕ್ಷದವರು ವಚನಭ್ರಷ್ಟರಾಗಿದ್ದಾರೆ ಎಂದು ರಾಜಕೀಯ ಪಕ್ಷಗಳ ವಿರುದ್ಧ ಆಕ್ರೋಶ ವ್ತಕ್ತಪಡಿಸಿದ್ದಾರೆ.
ಸ್ವರಾಜ್ ಇಂಡಿಯಾ ಪಕ್ಷ ಸಭೆಯಲ್ಲಿ ಮಾತನಾಡಿದ ಅವರು ದೇಶದಲ್ಲಿ ಪೇಶ್ವೆ ರೀತಿ ಆಡಳಿತ ನಡೆಯುತ್ತಿದೆ. ಗಾಂಧೀಜಿ ನಾಡಲ್ಲಿ ಗೋಡ್ಸೆ ಹೀರೋ ಆಗುತ್ತಿದ್ದಾನೆ ಎಂದು ಹೇಳಿದ್ದಾರೆ. ಹಾಗೆ ಪ್ರಧಾನಿ ಮೋದಿ ಅವರು ಹೇಳಿದಂತೆ ನಡೆದುಕೊಂಡಿಲ್ಲ. ನಿರೀಕ್ಷಿತ ಮಟ್ಟದಲ್ಲಿ ಉದ್ಯೋಗ ಸೃಷ್ಟಿಯಾಗಿಲ್ಲ. ಉದ್ಯೋಗ ಸಿಗದೇ ಯುವಕರು ಸಮಸ್ಯೆಗೆ ಸಿಲುಕುತ್ತಿದ್ದಾರೆ. ಪ್ರಧಾನಿ ಮೋದಿ ಹಾಗು ಕಾಂಗ್ರೆಸ್ ಪಕ್ಷದವರು ವಚನಭ್ರಷ್ಟರಾಗಿದ್ದಾರೆ. ಇವರು ಭರವಸೆ ನೀಡುತ್ತಾರೆ ಆದರೆ ಜಾರಿಗೆ ತರುವುದಿಲ್ಲ ಎಂದು ರಾಜಕೀಯ ಪಕ್ಷಗಳ ವಿರುದ್ಧ ಕಿಡಿಕಾರಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ