Select Your Language

Notifications

webdunia
webdunia
webdunia
webdunia

ಉಡ, ಚಿಪ್ಪು ಹಂದಿ ಮಾರಾಟಗಾರರ ಬಂಧನ

ಉಡ, ಚಿಪ್ಪು ಹಂದಿ ಮಾರಾಟಗಾರರ ಬಂಧನ
ಚಿಕ್ಕಮಗಳೂರು , ಶನಿವಾರ, 15 ಡಿಸೆಂಬರ್ 2018 (16:40 IST)
ಬಹು ಬೇಡಿಕೆಯ ಉಡ ಹಾಗೂ ಚಿಪ್ಪು ಹಂದಿಯ ಬಿಡಿ ಭಾಗಗಳನ್ನ ಮಾರಾಟ ಮಾಡಲು ಯತ್ನಿಸುತ್ತಿದ್ದ ಇಬ್ಬರನ್ನ ಅರಣ್ಯಾಧಿಕಾರಿಗಳು ಬಂಧಿಸಿದ್ದಾರೆ.

ಚಿಕ್ಕಮಗಳೂರು ನಗರದಲ್ಲಿ ಆರೋಪಿಗಳನ್ನು ಬಂಧಿಸಿರುವ ಘಟನೆ ನಡೆದಿದೆ. ಚಿಕ್ಕಮಗಳೂರು ಆರ್ ಎಫ್ ಓ ಶಿಲ್ಪಾ ಗ್ರಾಹಕರ ಸೋಗಿನಲ್ಲಿ ದಾಳಿ ಮಾಡಿ ಇಬ್ಬರು ಚಿಪ್ಪು ಹಂದಿ ಬಿಡಿ ಭಾಗ ಮತ್ತು ಉಡ ಪ್ರಾಣಿಯ ಗುಪ್ತಾಂಗ ಭಾಗಗಳನ್ನು ಮಾರಾಟ ಮಾಡಲು ಯತ್ನಿಸಿದ್ದಾಗ ದಾಳಿ ಮಾಡಿ ಬಂಧಿಸಿದ್ದಾರೆ.

ಯಾದಗಿರಿ ಜಿಲ್ಲೆ ಶಹಪುರ ಮೂಲದ ರಾಮು ಹಾಗೂ ವೆಂಕಟೇಶ ಬಂಧಿತ ಆರೋಪಿಗಳು. ಬಂಧಿತ ಆರೋಪಿಗಳಿಂದ ಹತ್ತಾರು ಉಡದ ಗುಪ್ತಾಂಗ ಭಾಗ, ಮೂರು ಚಿಪ್ಪು ಹಂದಿ ಬಿಡಿ ಭಾಗವನ್ನು ಅರಣ್ಯಾಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಉಡ ಪ್ರಾಣಿಯ ಗುಪ್ತಾಂಗ ಭಾಗಕ್ಕೆ ಮಾರುಕಟ್ಟೆಯಲ್ಲಿ ಭಾರೀ ಬೇಡಿಕೆಯಿದೆ. ಮಾಟ, ಮಂತ್ರ ಹಾಗೂ ಲೈಂಗಿಕ ಶಕ್ತಿ ಹೆಚ್ಚಿಸಿಕೊಳ್ಳೋಕೆ ಈ ಭಾಗಗಳನ್ನು  ಬಳಸುತ್ತಾರೆ. ಈ ಸಂಬಂಧ ಚಿಕ್ಕಮಗಳೂರು ವಲಯದಲ್ಲಿ ಪ್ರಕರಣ ದಾಖಲಾಗಿದೆ.



Share this Story:

Follow Webdunia kannada

ಮುಂದಿನ ಸುದ್ದಿ

ಸುಳ್ವಾಡಿ ಗ್ರಾಮದ ವಿಷಾಹಾರ ಸೇವನೆ ಪ್ರಕರಣ: ಬಂಧಿತರ ಸಂಖ್ಯೆ ಮೂರಕ್ಕೆ ಏರಿಕೆ