Select Your Language

Notifications

webdunia
webdunia
webdunia
webdunia

ಮಾವಿಗೆ ಬೆಂಬಲ ಬೆಲೆ ಘೋಷಣೆಗೆ ಆಗ್ರಹ

ಮಾವಿಗೆ ಬೆಂಬಲ ಬೆಲೆ ಘೋಷಣೆಗೆ ಆಗ್ರಹ
ಕೋಲಾರ , ಶುಕ್ರವಾರ, 6 ಜುಲೈ 2018 (15:02 IST)
ಮಾವು ಎಂದರೆ ಸಾಕು ಥಟ್ಟನೆ ಎಲ್ಲರ ಬಾಯಲ್ಲಿ ನೀರೂರುತ್ತೆ. ಹಣ್ಣುಗಳ ರಾಜನಾಗಿರುವ ಮಾವಿಗೆ ರಾಜ್ಯ ಸರಕಾರ ಬೆಂಬಲ ಬೆಲೆ ಘೋಷಣೆ ಮಾಡಬೇಕು. ಹೀಗಂತ ಆಗ್ರಹಿಸಿ ಬೆಳೆಗಾರರು ಧರಣಿ ಮಾಡಿದ್ದಾರೆ.
 
ಮಾವಿಗೆ ಬೆಂಬಲ ಬೆಲೆಯನ್ನು ನೀಡಬೇಕೆಂದು ಆಗ್ರಹಿಸಿ ಕೋಲಾರ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಮಾವು ಬೆಳೆಗಾರರು ಪ್ರತಿಭಟನೆ ನಡೆಸಿದ್ದಾರೆ. 
 
ಮಾವಿಗೆ ಬೆಂಬಲ ಬೆಲೆ ಘೋಷಣೆ ಮಾಡಬೇಕು. ಮಾವು ತಿರುಳು ಕಾರ್ಖಾನೆ ಸ್ಥಾಪನೆ ಮಾಡಬೇಕು. ಆಂಧ್ರ ಪ್ರದೇಶ ಮತ್ತು ತಮಿಳುನಾಡು ಸರಕಾರಗಳು ಮಾವಿನ ಹಣ್ಣು ಸರಬರಾಜು ಮೇಲೆ ನಿಷೇಧ ಹೇರಿರುವುದನ್ನು ತೆರವುಗೊಳಿಸಬೇಕೆಂದು ಧರಣಿ ನಿರತರು ಒತ್ತಾಯಿಸಿ, ಹೆಚ್ಚುವರಿ ಜಿಲ್ಲಾಧಿಕಾರಿ ಕೆ.ವಿದ್ಯಾಕುಮಾರಿ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಿದರು. 
 
 
 

Share this Story:

Follow Webdunia kannada

ಮುಂದಿನ ಸುದ್ದಿ

ಮಳೆಗಾಗಿ ಪ್ರಾರ್ಥನೆ: ಉಚ್ಚೆಂಗಮ್ಮನಿಗೆ 101 ಕೊಡಗಳ ನೀರಿನ ಅಭಿಷೇಕ