Webdunia - Bharat's app for daily news and videos

Install App

ದಬ್ಬಾಳಿಕೆ ಮೂಲಕ ಕರ ವಸೂಲಿ: ಪ್ರತಿಭಟನೆಗೆ ವ್ಯಾಪಾರಸ್ಥರ ಸಿದ್ಧತೆ

Webdunia
ಗುರುವಾರ, 13 ಸೆಪ್ಟಂಬರ್ 2018 (16:45 IST)
ಗೌರಿ ಗಣೇಶ ಹಬ್ಬದ ಪ್ರಯುಕ್ತ ನಗರದ ಹನುಮಂತಪ್ಪ ವೃತ್ತದ ಬಳಿ ಹಬ್ಬಕ್ಕೆ ಬೇಕಾಗಿರುವ ಎಲ್ಲ ಸಾಮಗ್ರಿಗಳನ್ನು ಒಂದೇ ಕಡೆ ಸಿಗುವಂತೆ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ವ್ಯಾಪಾರಸ್ಥರಿಗೆ ಸ್ಥಳಾವಕಾಶ ನಗರಸಭೆಯು ಮಾಡಿಕೊಟ್ಟಿದೆ.

ಚಿಕ್ಕಮಗಳೂರು ನಗರಸಭೆ ವತಿಯಿಂದ ಕರ ವಸೂಲಿ ಮಾಡಲು ನೇಮಕ ಮಾಡಿದ್ದ ವ್ಯಕ್ತಿಯೊಬ್ಬ ದೌರ್ಜನ್ಯದಿಂದ ಕರ ವಸೂಲಿ ಮಾಡಿದ್ದಾನೆ. ನಗರಸಭೆ ನಿಗದಿಪಡಿಸಿರುವ ಕರ ಹತ್ತು ರೂಪಾಯಿ ಆಗಿದ್ದರೆ. ಈತ ವಸೂಲಿ ಮಾಡುತ್ತಿದ್ದದ್ದು ಐವತ್ತರಿಂದ ನೂರು ರೂಪಾಯಿ. ಯಾಕೆ ಸ್ವಾಮಿ ಹೀಗೆ ಅಂತ ವ್ಯಾಪಾರಸ್ಥರು ಕೇಳಿದ್ದಕ್ಕೆ ಅವರಿಗೆ ದಬ್ಬಾಳಿಕೆಯಿಂದ ಹೆದರಿಸಿ ಮುಂದೆ ನೀನು ಎಲ್ಲಿ ವ್ಯಾಪಾರ ಮಾಡುತ್ತೀಯಾ? ಹೇಗೆ ವ್ಯಾಪಾರ ಮಾಡುತ್ತೀಯಾ? ನಾನು ನೋಡಿಕೊಳ್ಳುತ್ತೇನೆ ಎಂಬಂತಹ ದಬ್ಬಾಳಿಕೆಯ ಮಾತು ಆಡುವುದರ ಜೊತೆಗೆ ನಿನ್ನನ್ನು ನೋಡಿಕೊಳ್ಳುತ್ತೇನೆ ಎಂದು ಬೆದರಿಕೆಯನ್ನು ಹಾಕಿದ್ದಾನೆ. ಈತನ ವಿರುದ್ಧ ಸ್ಥಳೀಯ ಎಲ್ಲ ವ್ಯಾಪಾರಸ್ಥರು ಒಟ್ಟುಗೂಡಿ ನಗರಸಭೆಗೆ ಮುಂದೆ ಸಂಘಟನೆಗಳ ಬೆಂಬಲದೊಂದಿಗೆ ಪ್ರತಿಭಟನೆಗೆ ಸಿದ್ಧತೆ ನಡೆಸಲಾಗುತ್ತಿದೆ.

ಹೆಚ್ಚಿನ ಕರ ವಸೂಲಿ ಮಾಡುತ್ತಿರುವವನ ವಿರುದ್ಧ ಪೊಲೀಸ್ ಇಲಾಖೆಗೆ ದೂರನ್ನು ನೀಡುವುದಕ್ಕೆ ವ್ಯಾಪಾರಿಗಳು ಮುಂದಾಗಿದ್ದಾರೆ. ಬಡವರ ಮೇಲೆ, ಫುಟ್ಪಾತ್ ವ್ಯಾಪಾರಿಗಳ ಮೇಲೆ ಈ ರೀತಿ ದಬ್ಬಾಳಿಕೆ ಮಾಡುವುದು ಎಷ್ಟರ ಮಟ್ಟಿಗೆ ಸರಿ ಎಂಬ ಮಾತು ಕೇಳಿ ಬರುತ್ತಿದೆ.


ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Rahul Gandhi: ನೆಹರೂ ತಾತ ನಮ್ಗೆ ರಾಜಕೀಯವೇ ಹೇಳಿ ಕೊಟ್ಟಿಲ್ಲ

ಐಸಿಯುವಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಗಗನಸಖಿ ಮೇಲೆ ಅತ್ಯಾಚಾರ, ರೇಪಿಸ್ಟ್‌ ಕೊನೆಗೂ ಅರೆಸ್ಟ್‌

ದಲಿತ ವಿದ್ಯಾರ್ಥಿನಿ ಆತ್ಮಹತ್ಯೆ: ಸಾವಿನ ಹಿಂದೆ ಮುಸ್ಲಿಂ ಯುವಕನ ಕಿರುಕುಳ ಆರೋಪ

Viral Video:ರನ್ಯಾ ರಾವ್ ಪ್ಲ್ಯಾನ್‌ಗಿಂತಲೂ ಖತರ್ನಾಕ್ ಆಗಿ ಮದ್ಯದ ಬಾಟಲಿ ಎಗರಿಸಿದ ಮಹಿಳೆ, ನೋಡಿದ್ರೆ ಶಾಕ್ ಆಗ್ತೀರಾ

Viral Video:ಜನರನ್ನು ರಕ್ಷಣೆ ಮಾಡಬೇಕಿದ್ದ ಪೊಲೀಸ್‌ ಅನ್ನೇ ಕೈ ಹಿಡಿದು ನಡೆಸುವ ಸ್ಥಿತಿ, ಈ ರೀತಿಯಾದ್ರೆ ಏನ್‌ ಕತೆ

ಮುಂದಿನ ಸುದ್ದಿ
Show comments