Select Your Language

Notifications

webdunia
webdunia
webdunia
webdunia

ಅಪ್ಪು ಅಭಿಮಾನಿಗಳ ಸಾವಿನ ಸಂಖ್ಯೆ ಏರಿಕೆ

ಅಪ್ಪು ಅಭಿಮಾನಿಗಳ ಸಾವಿನ ಸಂಖ್ಯೆ ಏರಿಕೆ
bangalore , ಬುಧವಾರ, 3 ನವೆಂಬರ್ 2021 (20:29 IST)
ಅಪ್ಪು ಅಭಿಮಾನಿಗಳ ಸಾವಿನ ಸಂಖ್ಯೆ ಏರಿಕೆಯಾಗ್ತಿದೆ. ಒಂದೇ ದಿನದಲ್ಲಿ ತುಮಕೂರಿನಲ್ಲಿ ಇಬ್ಬರು ಸಾವನ್ನಪ್ಪಿದ್ರೆ, ದಾವಣಗೆರೆಯಲ್ಲಿ ಮತ್ತೊಬ್ಬ ಕೊನೆಯುಸಿರು ಎಳೆದಿದ್ದಾನೆ. ಹೆಬ್ಬೂರಿನ ಕೋಡಿಪಾಳ್ಯ ಗ್ರಾಮದ ಭರತ್ ಎಂಬಾತ ಡೆತ್ ನೋಟ್ ಬರೆದಿಟ್ಟು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ. ನಾನು ಅಪ್ಪು ಅಭಿಮಾನಿ, ಅಪ್ಪು ಸಾವು ಸಹಿಸಲಾಗುತ್ತಿಲ್ಲ.. ಅಪ್ಪು ಹೋದ ಜಾಗಕ್ಕೆ ನಾನು ಹೋಗ್ತಿದ್ದೇನೆ. ಅಪ್ಪುನಂತೆ ನನ್ನ ಕಣ್ಣು ಸಹ ದಾನ ಮಾಡಿ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾನೆ. ಕೊನೆಗೆ ಭರತ್ ಆಸೆಯಂತೆ, ಕುಟುಂಬಸ್ಥರು ಕಣ್ಣು ದಾನ ಮಾಡಿದ್ದಾರೆ. ತುಮಕೂರಿನ ಹಿರೇಹಳ್ಳಿಯ ಅಪ್ಪು ಶ್ರೀನಿವಾಸ್ ಎಂಬಾತ ಅಪ್ಪು ಅಂತಿಮ ದರ್ಶನ ಪಡೆದು ಮನೆಗೆ ಮರಳಿದ್ದಾಗ ಎದೆನೋವು ಕಾಣಿಸಿಕೊಂಡಿದೆ. ತಕ್ಷಣ ಆಸ್ಪತ್ರೆ ದಾಖಲಿಸಿದ್ರೂ ಚಿಕಿತ್ಸೆ ಫಲಿಸದೇ ಕೊನೆಯುಸಿರು ಎಳೆದಿದ್ದಾನೆ. 
ಇನ್ನೂ ದಾವಣಗೆರೆಯಲ್ಲಿ ಪುನೀತ್ ನಿಧನದ ದಿನದಿಂದ ಖೀನತೆಗೊಳಗಾಗಿದ್ದ ಸಿ. ಕುಮಾರ್ ಎಂಬ ಅಭಿಮಾನಿ ನೇಣಿಗೆ ಶರಣಾಗಿದ್ದಾನೆ. ಅಪ್ಪು ಅಪ್ಪಟ ಅಭಿಮಾನಿಯಾಗಿದ್ದ ಕುಮಾರ್, ಅಪ್ಪು ನಟಿಸಿರೋ ಸಿನಿಮಾ ಒಂದೂ ಬಿಡದೆ ನೋಡುತ್ತಿದ್ದ. ಮನೆಯಲ್ಲಿ ಯಾರೂ ಇಲ್ಲದೇ ವೇಳೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ.

Share this Story:

Follow Webdunia kannada

ಮುಂದಿನ ಸುದ್ದಿ

ಅಯೋಧ್ಯೆಯಲ್ಲಿ ಸೋಮವಾರ ಸಂಜೆಯಿಂದ ಅದ್ಧೂರಿ ದೀಪೋತ್ಸವಕ್ಕೆ ಚಾಲನೆ