Webdunia - Bharat's app for daily news and videos

Install App

ಡೆಡ್ಲಿ ಕೊರೊನಾಕ್ಕೆ ವ್ಯಕ್ತಿ ಬಲಿ : ರಾಜ್ಯದಲ್ಲೇ ಹೆಚ್ಚು ಸಾವು ಕಂಡ ಜಿಲ್ಲೆ

Webdunia
ಮಂಗಳವಾರ, 28 ಏಪ್ರಿಲ್ 2020 (13:58 IST)
ಕೊರೋನಾ ಸೋಂಕಿನಿಂದ 57 ವರ್ಷದ ವ್ಯಕ್ತಿ ನಿಧನರಾಗಿದ್ದಾರೆ. ಈ ಮೂಲಕ ಡೆಡ್ಲಿ ಕೊರೊನಾಕ್ಕೆ ಈ ಜಿಲ್ಲೆಯಲ್ಲಿ ಸಾವನ್ನಪ್ಪಿದವರ ಸಂಖ್ಯೆ 5 ಕ್ಕೆ ಏರಿಕೆಯಾಗಿದೆ.

ಕಲಬುರಗಿ ಜಿಲ್ಲೆಯ ಆಳಂದ ಪಟ್ಟಣದ ಶರಣ ನಗರದ 57 ವರ್ಷದ ವ್ಯಕ್ತಿ ಏಪ್ರಿಲ್ 27 ರಂದು ನಿಧನರಾಗಿದ್ದಾರೆ. ಹೀಗಂತ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಪ್ರಕಟಣೆ ತಿಳಿಸಿದೆ. 

ಮೃತ ವ್ಯಕ್ತಿ ಸೋಲಾಪುರ ಪ್ರವಾಸ ಹಿನ್ನೆಲೆ ಹೊಂದಿದ್ದನು. ತೀವ್ರ ಉಸಿರಾಟದ ತೊಂದರೆಯಿಂದ ಏಪ್ರಿಲ್ 21 ರಂದು ಕಲಬುರಗಿ ಕೋವಿಡ್-19 ಆಸ್ಪತೆಯಲ್ಲಿ ದಾಖಲಾಗಿದ್ದರು.  ಏಪ್ರಿಲ್ 22 ರಂದು ಅವರಲ್ಲಿ ಕೋವಿಡ್-19 ದೃಢವಾಗಿತ್ತು.

ಈ ಮೂಲಕ ಕಲಬುರಗಿ ಜಿಲ್ಲೆಯಲ್ಲಿ ಡೆಡ್ಲಿ ಕೊರೊನಾಕ್ಕೆ ಬಲಿಯಾದವರ ಸಂಖ್ಯೆ 5 ಕ್ಕೆ ಏರಿಕೆಯಾದಂತಾಗಿದೆ. ಇದುವರೆಗೂ ಪ್ರಾಥಮಿಕ ಸಂಪರ್ಕದ 688, ದ್ವಿತೀಯ ಸಂಪರ್ಕದ 2,504 ಹಾಗೂ 488 ವಿದೇಶಿ ಪ್ರಯಾಣಿಕರನ್ನು ಗುರುತಿಸಲಾಗಿದೆ.

1,455 ಜನರು ಹೋಂ ಕ್ವಾರಂಟೈನ್ ನಲ್ಲಿದ್ದರೆ, 981 ಜನರು 28 ದಿನಗಳ ಕ್ವಾರಂಟೈನ್ ಅವಧಿ ಪೂರ್ಣಗೊಳಿಸಿದ್ದಾರೆ. 224 ಜನರು ಐಸೋಲೇಷನ್ ವಾರ್ಡಿನಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. 3,667 ಜನರ ಮಾದರಿಗಳಲ್ಲಿ 44 ಜನರ ರಿಪೋರ್ಟ್ ಪಾಸಿಟಿವ್ ಬಂದಿದೆ. 7 ಜನರು ಕೊರೊನಾದಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಎಲ್ಲಿ ಮಾಡಿದ ಭಾಷಣದಲ್ಲಿ Kalladaka Prabhakar Bhat ಮೇಲೆ ದಾಖಲಾಯಿತು ಪ್ರಕರಣ

Coastal Karnataka Communal Case:ಹೊಸ ವಿಶೇಷ ಪಡೆ ರಚಿಸಿದ ಸರ್ಕಾರ

Communal Case, ಕರಾವಳಿ ಪರಿಸ್ಥಿತಿಗೆ ರಾಜ್ಯ ಸರ್ಕಾರವೇ ಹೊಣೆ: ಬಿವೈ ವಿಜಯೇಂದ್ರ

ಸೇನಾ ಶಿಬಿರದ ಮೇಲೆ ಭೂಕುಸಿತ: ಮೂವರ ಮೃತದೇಹ ಹೊರಕ್ಕೆ, ಹಲವರು ಸಿಲುಕಿರುವ ಶಂಕೆ

ಕೊಲೆ ಪ್ರಕರಣದ ಆರೋಪಿಗಳಿಗೆ ಮತೀಯ ಸಂಘನೆಯ ನಂಟು: ದಕ ಜಿಲ್ಲಾ ಎಸ್ಪಿ ಕೆ ಅರುಣ್‌

ಮುಂದಿನ ಸುದ್ದಿ
Show comments