Webdunia - Bharat's app for daily news and videos

Install App

ಸರಕಾರ ಸುಭದ್ರವಾಗಿದೆ ಎಂದ ಡಿಸಿಎಂ

Webdunia
ಭಾನುವಾರ, 23 ಸೆಪ್ಟಂಬರ್ 2018 (18:28 IST)
ರಾಜ್ಯದ ಸಮ್ಮಿಶ್ರ ಸರ್ಕಾರ ಸುಭದ್ರವಾಗಿದೆ. ಯಾವುದೇ ಕಾರಣಕ್ಕೂ ಶಾಸಕರು ಬೇರೆ ಪಕ್ಷಕ್ಕೆ ಹೊಗುವುದಿಲ್ಲ ಎಂದು ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಹೇಳಿದ್ದಾರೆ.

ಉತ್ತರಕನ್ನಡ ಜಿಲ್ಲೆಯ ಕಾರವಾರ ಹಣಕೋಣಕ್ಕೆ ಬಂದ  ಸಂದರ್ಭದಲ್ಲಿ ಹೇಳಿಕೆ ನೀಡಿದ ಪರಮೇಶ್ವರ್, ಪಕ್ಷದ ಯಾವ ಶಾಸಕರು ರೆಸಾರ್ಟ್ ನತ್ತ ಹೋಗುತ್ತಿಲ್ಲ. ಒಂದಿಬ್ಬರು ಅವರ ಖಾಸಗಿ ಜೀವನಕ್ಕಾಗಿ ಹೋಗಿದ್ದರೆ ಅದಕ್ಕೆ ಬೇರೆ ಅರ್ಥ ಕಲ್ಪಿಸುವುದು ಬೇಡ ಎಂದು ಹೇಳಿದ್ದಾರೆ. ಇನ್ನು ಬಿಜೆಪಿಗರು ಅಪರೇಷನ್ ಕಮಲ ಮಾಡಿ ಸರ್ಕಾರ ರಚನೆ ಮಾಡೋ ಪ್ರಯತ್ನ ಮಾಡಿ ವಿಫಲವಾಗಿದ್ದಾರೆ. ಸರ್ಕಾರ ಬೀಳಿಸುವ ಬಿಜೆಪಿ ಕನಸ್ಸು ಯಾವುದೇ ಕಾರಣಕ್ಕೂ ನನಸಾಗುವುದಿಲ್ಲ ಎಂದರು.

ಮುಖ್ಯಮಂತ್ರಿ ದಂಗೆ ಅನ್ನುವ ಪದ ಬಳಕೆ ಮಾಡಿರುವುದಕ್ಕೆ ವಿಶೇಷ ಅರ್ಥ ಕಲ್ಪಿಸುವುದು ಬೇಡ. ಅವರು ಯಾವ ಸಂದರ್ಭದಲ್ಲಿ ಪದ ಬಳಕೆ ಮಾಡಿದ್ದಾರೆನ್ನುವುದು ನೋಡಲಿ ಎಂದು ಸಿಎಂ ಕುಮಾರಸ್ವಾಮಿ ಹೇಳಿಕೆ ಸಮರ್ಥಿಸಿಕೊಂಡರು.

ಸಚಿವ ಸಂಪುಟ ವಿಸ್ತರಣೆ ಶೀಘ್ರದಲ್ಲಿ ನಡೆಯಲಿದೆ. ವಿಧಾನ ಪರಿಷತ್ ಚುನಾವಣೆ ಮುಂದಿನ ತಿಂಗಳು ನಡೆಯಲಿದ್ದು ಇದಾದ ನಂತರ ಮಾಡಲಾಗುವುದು. ಅದೇ ಸಂದರ್ಭದಲ್ಲಿ ಖಾತೆ ಬದಲಾವಣೆಯನ್ನ ಸಹ ಮಾಡಲಾಗುವುದು ಎಂದು ಪರಮೇಶ್ವರ್ ಹೇಳಿದ್ದಾರೆ.

ದೇವಸ್ಥಾನಕ್ಕೆ ಭೇಟಿ ನೀಡಿರುವುದರಲ್ಲಿ ವಿಶೇಷವೇನಿಲ್ಲ. ಸಾಮಾನ್ಯವಾಗಿ ದೇವರ ದರ್ಶನಕ್ಕಾಗಿ ಆಗಮಿಸಿದ್ದೇನೆಂದು ಪರಮೇಶ್ವರ್ ಈ ಸಂದರ್ಭದಲ್ಲಿ ಹೇಳಿದರು.


ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ದುಡ್ಡಿಲ್ಲ ಎಂದು ಪ್ರೀತಿಯ ಬೈಕ್ ಮಾರಿದ ಯುವಕ ನಂತರ ಮಾಡಿದ್ದೇನು ನೋಡಿ.. ನಿಜಕ್ಕೂ ಭಾವುಕರಾಗ್ತೀರಿ Video

ಛೀ ಇವರೆಲ್ಲಾ ಮನುಷ್ಯರಾ… ನೇಪಾಳ ಪ್ರವಾಹದಲ್ಲಿ ಸತ್ತು ಬಿದ್ದ ಮಹಿಳೆಯ ಚಿನ್ನ ಕಸಿಯಲು ಯುವಕರ ಸರ್ಕಸ್ ನೋಡಿ Video

ನೇಪಾಳ ಪ್ರವಾಹಕ್ಕೆ ಕಾರಣವಾದ ಹಿಮಬಂಡೆಗಳ ಸ್ಪೋಟದ ಭಯಾನಕ ದೃಶ್ಯ ಬಯಲು: Video

ಕುಮಾರಸ್ವಾಮಿಯವರನ್ನು ಕಾರಿನಲ್ಲಿ ನೋಡಿದ ಸ್ಕೂಟರ್ ಸವಾರ ಹೇಳಿದ್ದೇನು ನೋಡಿ: ವೈರಲ್ ಆಯ್ತು Video

ಹಾಲಿವುಡ್ ಸಿನಿಮಾವಲ್ಲ ಇದು ರಿಯಲ್…ನೇಪಾಳದಲ್ಲಿ ಇದ್ದಕ್ಕಿದ್ದಂತೆ ರಾಕ್ಷಸನಂತೆ ನುಗ್ಗಿಬಂದ ಅಲೆಗಳು Shocking video

ಮುಂದಿನ ಸುದ್ದಿ
Show comments