Select Your Language

Notifications

webdunia
webdunia
webdunia
webdunia

ಸಿಎಂ ಆಗುವ ಬಯಕೆ ಡಿಸಿಎಂ ಪರಮೇಶ್ವರ್ ಗೆ: ಕುಮಾರಸ್ವಾಮಿ ಹೇಳಿದ್ದೇನು ಗೊತ್ತಾ?!

ಸಿಎಂ ಆಗುವ ಬಯಕೆ ಡಿಸಿಎಂ ಪರಮೇಶ್ವರ್ ಗೆ: ಕುಮಾರಸ್ವಾಮಿ ಹೇಳಿದ್ದೇನು ಗೊತ್ತಾ?!
ಬೆಂಗಳೂರು , ಭಾನುವಾರ, 18 ನವೆಂಬರ್ 2018 (09:35 IST)
ಬೆಂಗಳೂರು: ಡಿಸಿಎಂ ಪರಮೇಶ್ವರ್ ಗೆ ಮುಖ್ಯಮಂತ್ರಿಯಾಗುವ ಕನಸು ಹುಟ್ಟಿಕೊಂಡಿದೆ. ಇದಕ್ಕೆ ಸಿಎಂ ಕುಮಾರಸ್ವಾಮಿ ಕೊಟ್ಟ ಪರೋಕ್ಷ ಟಾಂಗ್ ಏನು ಗೊತ್ತಾ?

ಮಾಧ್ಯಮಗಳೊಂದಿಗೆ ಮಾತನಾಡಿದ ಡಿಸಿಎಂ ಪರಮೇಶ್ವರ್ ಒಂದು ವೇಳೆ ಸಿಎಂ ಪಟ್ಟ ಕೊಟ್ಟರೆ ನಿಭಾಯಿಸಲು ಸಿದ್ಧ ಎನ್ನುವ ಮೂಲಕ ಮುಖ್ಯಮಂತ್ರಿಯಾಗುವ ಕನಸು ಹೇಳಿಕೊಂಡಿದ್ದಾರೆ.

ಇದಕ್ಕೆ ಇನ್ನೊಂದು ಕಡೆ ಮಾಧ್ಯಮಗಳಿಗೆ ಪರೋಕ್ಷವಾಗಿ ಪ್ರತಿಕ್ರಿಯಿಸಿರುವ ಸಿಎಂ ಕುಮಾರಸ್ವಾಮಿ ‘ನಾನು ಸಿಎಂ ಆಗಿದ್ದೇ ವಿಚಿತ್ರ ಪರಿಸ್ಥಿತಿಯಲ್ಲಿ. ಮುಖ್ಯಮಂತ್ರಿ ಪಟ್ಟ ಯಾವತ್ತೂ ಶಾಶ್ವತ ಅಲ್ಲ’ ಎಂದು ಟಾಂಗ್ ಕೊಟ್ಟಿದ್ದಾರೆ. ಈ ನಡುವೆ ನ.28 ಕ್ಕೆ ರಾಜ್ಯ ಸಚಿವ ಸಂಪುಟ ವಿಸ್ತರಣೆಯಾಗಲಿದೆ ಎಂಬ ಸುದ್ದಿಯಿದೆ. ಹೀಗಾಗಿ ಸಚಿವಾಕಾಂಕ್ಷಿಗಳ ಅಸಮಾಧಾನ, ಹೈಡ್ರಾಮಾಗಳಿಗೆ ಮತ್ತೆ ರಾಜ್ಯ ರಾಜಕೀಯ ಸಾಕ್ಷಿಯಾಗುವ ಸಾಧ‍್ಯತೆಯಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

Share this Story:

Follow Webdunia kannada

ಮುಂದಿನ ಸುದ್ದಿ

ನಿಲ್ಲದ ಸಿದ್ದರಾಮಯ್ಯ-ಸದಾನಂದ ಗೌಡ ತಿಕ್ಕಾಟ