Publish Date: Sun, 17 Dec 2023 (19:46 IST)
Updated Date: Sun, 17 Dec 2023 (19:08 IST)
ನಗರದ ಫ್ರೀಡಂ ಪಾರ್ಕ್ ನಲ್ಲಿ ವಿಷ್ಣು ಅಭಿಮಾನಿಗಳಿಂದ ನಡೆಯುತ್ತಿರುವ ಪ್ರತಿಭಟನೆಯಲ್ಲಿ ಕರವೇ ನಾರಾಯಣ ಗೌಡ್ರು ಭಾಗಿಯಾಗಿದ್ರು.ಈ ವೇಳೆ ಮಾತನಾಡಿದ ಅವರು ಡಿಕೆಶಿ ಅವರು ಭರವಸೆ ಕೊಟ್ಟಿದ್ದಾರೆ.ಡಿಕೆಶಿ ಅವರನ್ನು ಭೇಟಿ ಮಾಡಿ ಇಲ್ಲಿಗೆ ಬಂದಿದೀನಿ.ನಿಮ್ಮ ಬೇಡಿಕೆ ಏನು ಅದನ್ನು ಖಂಡಿತ ಈಡೇರಿಸುತ್ತೇವೆ ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ.
ವಿಷ್ಣುವರ್ಧನ್ ಅವರ ಪುಣ್ಯಭೂಮಿ ಅಲ್ಲೇ ಇರುತ್ತೆ.ಯಾರು ನೆಲಸಮ ಮಾಡಲು ಸಾಧ್ಯವಿಲ್ಲ.ನಾನು ಶ್ರೀನಿವಾಸ್ ಜೊತೆ ನಿಂತುಕೊಳ್ತೀನಿ.ಸಿಎಂ ಸಿದ್ದರಾಮಯ್ಯ ಅವರು ಅಪ್ಪಟ ಕನ್ನಡ ಪ್ರೇಮಿ.ನಾಡು ನುಡಿ ವಿಚಾರ ಬಂದಾಗ ಎದೆಗಾರಿಕೆಯಿಂದ ಮಾತಾಡ್ತಾರೆ ಅಂದ್ರೆ ಸಿದ್ದರಾಮಯ್ಯ ಮಾತ್ರ.ವಿಷ್ಣು ಪುಣ್ಯಭೂಮಿ ಎಷ್ಟು ಎಕರೆ ಇದೆ ಅಷ್ಟು ಖರೀದಿ ಮಾಡ್ತೀವಿ.. ಟೆನ್ಶನ್ ಬೇಡ ಎಂದು ಕರವೇ ನಾರಾಯಣ ಗೌಡ ಹೇಳಿದ್ದಾರೆ.