Select Your Language

Notifications

webdunia
webdunia
webdunia
webdunia

ಡಿಸಿಎಂ ದಲಿತ ಸಿಎಂ ಹೇಳಿಕೆ: ಖರ್ಗೆ ಹೇಳಿದ್ದೇನು ಗೊತ್ತಾ?

ಡಿಸಿಎಂ ದಲಿತ ಸಿಎಂ ಹೇಳಿಕೆ: ಖರ್ಗೆ ಹೇಳಿದ್ದೇನು ಗೊತ್ತಾ?
ಕಲಬುರ್ಗಿ , ಬುಧವಾರ, 27 ಫೆಬ್ರವರಿ 2019 (17:33 IST)
ನನಗೂ ಮತ್ತು ಮಲ್ಲಿಕಾರ್ಜುನ ಖರ್ಗೆ ಅವರಿಗೂ ಹಲವು ಬಾರಿ ಸಿಎಂ ಆಗೋ ಅವಕಾಶ ಸಿಕ್ಕರೂ ತಪ್ಪಿಸಲಾಗಿದೆ 
ಎಂದ ಡಿಸಿಎಂ ಹೇಳಿಕೆಗೆ ಮಲ್ಲಿಕಾರ್ಜುನ ಖರ್ಗೆ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ.

ಡಾ.ಜಿ. ಪರಮೇಶ್ವರ್ ಹೇಳಿಕೆಗೆ ಮಲ್ಲಿಕಾರ್ಜುನ ಖರ್ಗೆ ಪ್ರತಿಕ್ರಿಯೆ ನೀಡಿದ್ದು, ದಲಿತ ಸಿಎಂ ಹೇಳಿಕೆ ವಿಚಾರ ಪರಮೇಶ್ವರ್ ಅವರ ವೈಯಕ್ತಿಕ ಹೇಳಿಕೆಯಾಗಿದೆ. ಸಿಎಂ ಆಗದಿದ್ದರೇನು? ಕೇಂದ್ರದಲ್ಲಿ ವಿರೋಧ ಪಕ್ಷದ ನಾಯಕನಾಗಿ ಸಮರ್ಥವಾಗಿ ಕೆಲಸ ಮಾಡಿದ್ದೇನೆ. ನನ್ನ ಕಾರ್ಯವೈಖರಿಯನ್ನು ರಾಷ್ಟ್ರಮಟ್ಟದಲ್ಲಿ ಎಲ್ಲ ಪಕ್ಷಗಳ ಜನರು ಮೆಚ್ಚಿಕೊಂಡಿದ್ದಾರೆ. ಹೀಗಿರಬೇಕಾದರೆ ಸಿಎಂ ಅವಕಾಶ ತಪ್ಪಿದೆ ಎಂದು ಕೊರಗಿ ಕೊಡಲು ಆಗುವುದಿಲ್ಲ ಎಂದರು.  

ಕಾಂಗ್ರೆಸ್ ಸಂಸದೀಯ ನಾಯಕರಾಗಿರುವ ಮಲ್ಲಿಕಾರ್ಜುನ ಖರ್ಗೆ ಈ ಹೇಳಿಕೆ ನೀಡಿದ್ದು, ಮಲ್ಲಿಕಾರ್ಜುನ ಖರ್ಗೆ ಪ್ರಧಾನಿ ಸ್ಥಾನಕ್ಕೆ ಸೂಕ್ತ ಅಭ್ಯರ್ಥಿ ಎಂಬ ಶಾಮನೂರು ಶಿವಶಂಕರಪ್ಪ ಹೇಳಿಕೆ  ವಿಚಾರಕ್ಕೆ ಸಂಬಂಧಿಸಿಂತೆ ಮಾತನಾಡಿ, ಅವರ ಮನಸ್ಸಿನ ವಿಚಾರವನ್ನು ಅವರು ಹೇಳಿದ್ದಾರೆ. ನನ್ನ ಪಾಡಿಗೆ ನಾನು ಕೆಲಸ ಮಾಡಿಕೊಂಡು ಹೋಗುತ್ತೇನೆ ಎಂದು ಹೇಳಿದರು.




Share this Story:

Follow Webdunia kannada

ಮುಂದಿನ ಸುದ್ದಿ

ಸೈನಿಕನ ಮೇಲಿನ ಹಲ್ಲೆಗೆ ಖಂಡನೆ