Publish Date: Wed, 27 Feb 2019 (17:25 IST)
Updated Date: Wed, 27 Feb 2019 (17:29 IST)
ಕ್ಷುಲ್ಲಕ ಕಾರಣಕ್ಕಾಗಿ ನಿವೃತ್ತ CRPF ಯೋಧನ ಮೇಲೆ ನಡೆದ ಹಲ್ಲೆಗೆ ವ್ಯಾಪಕ ಖಂಡನೆ ವ್ಯಕ್ತವಾಗುತ್ತಿದೆ.
ಮಾಜಿ ಸೈನಿಕನ ಮೇಲೆ ಹಲ್ಲೆಯನ್ನು ಖಂಡಿಸಿ ಹಾವೇರಿಯಲ್ಲಿ ಇಂದು ಮಾಜಿ ಸೈನಿಕರ ಸಂಘದಿಂದ ಪ್ರತಿಭಟನೆ ನಡೆಸಲಾಯಿತು. ಕ್ಷುಲ್ಲಕ ಕಾರಣಕ್ಕಾಗಿ ನಿವೃತ್ತ CRPF ಯೋಧ ಪರಮೇಶ್ವರಪ್ಪ ಬಾರಂಗಿ ಮೇಲೆ ಅನ್ಯ ಕೋಮಿನ ಯುವಕರು ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದರು. ಅದರಲ್ಲಿ ಒಬ್ಬ ಪರಾರಿಯಾಗಿದ್ದ.
ಅವನನ್ನು ಕೂಡಲೇ ಬಂಧಿಸಬೇಕೆಂದು ನಗರದ ಹುಕ್ಕೇರಿ ಮಠದಿಂದ ಸಿದ್ದಪ್ಪ ಸರ್ಕಲ್ ವರೆಗೂ ಮೆರವಣಿಗೆ ಮೂಲಕ ಆಗ್ರಹ ಮಾಡಲಾಯಿತು. ದೇಶದ್ರೋಹಿಗಳ ವಿರುದ್ಧ ಘೋಷಣೆ ಕೂಗಿ ಪ್ರತಿಭಟನೆ ನಡೆಸಿದ್ರು. ಪ್ರತಿಭಟನೆಯಲ್ಲಿ ಹಾವೇರಿ ಜಿಲ್ಲಾ ಮಾಜಿ ಸೈನಿಕರು, ವಿವಿಧ ಹಿಂದೂ ಪರ ಸಂಘಟನೆಗಳು ಭಾಗವಹಿಸಿದ್ದವು.