Select Your Language

Notifications

webdunia
webdunia
webdunia
webdunia

ಕುಡಿದ ನಶೆಯಲ್ಲಿ ಕ್ಯಾಷಿಯರ್ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ್ದಾಕೆ?

ಕುಡಿದ ನಶೆಯಲ್ಲಿ ಕ್ಯಾಷಿಯರ್ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ್ದಾಕೆ?
ಕೋಲಾರ , ಭಾನುವಾರ, 24 ಫೆಬ್ರವರಿ 2019 (13:40 IST)
ಕುಡಿದ ಮದ್ಯದ ಹಣವನ್ನು ಕೇಳಿದ್ದಕ್ಕೆ ಬಾರ್ ವೊಂದರ ಕ್ಯಾಷಿಯರ್ ಮೇಲೆ ಮಾರಣಾಂತಿಕ ದಾಳಿ ನಡೆಸಲಾಗಿದೆ.

ಕೋಲಾರದಲ್ಲಿ ಕುಡಿದ ನಶೆಯಲ್ಲಿ ಮಾರಣಾಂತಿಕ ಹಲ್ಲೆ ನಡೆದಿದೆ. ಘಟನೆಯಲ್ಲಿ ಬಾರ್ ಕ್ಯಾಷಿಯರ್ ಸೇರಿದಂತೆ ಮೂವರಿಗೆ ಗಂಭೀರ ಗಾಯಗಳಾಗಿವೆ. ಕೋಲಾರದ ಅಮ್ಮೇರಹಳ್ಳಿಯ ನಂದಿನಿ ಬಾರ್ ನಲ್ಲಿ ಘಟನೆ ನಡೆದಿದೆ.

ಹಲ್ಲೆ ನಡೆಸುತ್ತಿರುವ ದೃಶ್ಯಗಳು ಬಾರ್ ನ ಸಿಸಿಟಿವಿಯಲ್ಲಿ ಸೆರೆಯಾಗಿವೆ. ಮದ್ಯದ ಹಣವನ್ನ ಕೇಳಿದ್ದಕ್ಕೆ ಕ್ಯಾಷಿಯರ್ ಸೇರಿದಂತೆ ಮೂವರಿಗೆ ಹಲ್ಲೆ ಮಾಡಲಾಗಿದೆ. ದೊಣ್ಣೆ ಮತ್ತು ಬೀರು ಬಾಟಲಿನಿಂದ ಹಲ್ಲೆ ಮಾಡಿದ ಗುಂಪು ಪರಾರಿಯಾಗಿದೆ. ಕುಡಿತದ ನಶೆಯಲ್ಲಿದ್ದ ನಾಲ್ವರಿಂದ ಕೃತ್ಯ ನಡೆದಿದೆ. ಗಂಭೀರವಾಗಿ ಗಾಯಗೊಂಡ ಮೂವರನ್ನು ಕೋಲಾರದ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಈ ಕುರಿತು ಕೋಲಾರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



Share this Story:

Follow Webdunia kannada

ಮುಂದಿನ ಸುದ್ದಿ

ವೋಡಾಫೋನ್ ತನ್ನ ಗ್ರಾಹಕರಿಗಾಗಿ ಬಿಡುಗಡೆ ಮಾಡಿದೆ ಈ ಹೋಸ ಪ್ರೀಪೇಯ್ಡ್ ಪ್ಲಾನ್