Select Your Language

Notifications

webdunia
webdunia
webdunia
webdunia

ಹೊರ ರಾಜ್ಯಗಳಿಗೆ ಕಬ್ಬು ಕಳಿಸದಂತೆ ಡಿಸಿ ಎಚ್ಚರಿಕೆ

ಹೊರ ರಾಜ್ಯಗಳಿಗೆ ಕಬ್ಬು ಕಳಿಸದಂತೆ ಡಿಸಿ ಎಚ್ಚರಿಕೆ
ಮಂಡ್ಯ , ಮಂಗಳವಾರ, 16 ಜೂನ್ 2020 (20:21 IST)
ಕಬ್ಬನ್ನು ಹೊರ ರಾಜ್ಯಗಳಿಗೆ ಸರಬರಾಜು ಮಾಡಬಾರದು ಎಂದು ಜಿಲ್ಲಾಧಿಕಾರಿ ಖಡಕ್ ಸೂಚನೆ ಕೊಟ್ಟಿದ್ದಾರೆ.

ಮಂಡ್ಯ ಜಿಲ್ಲೆಯ ಕಬ್ಬನ್ನು ಹೊರರಾಜ್ಯಗಳಿಗೆ ಸರಬರಾಜು ಮಾಡದೆ ಎಲ್ಲಾ ಕಬ್ಬನ್ನು ಜಿಲ್ಲೆಯ ಕಾರ್ಖಾನೆಗಳಿಗೆ ನೀಡಬೇಕು ಎಂದು ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್, ಕಾರ್ಖಾನೆಯ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

2019-2020 ನೇ ಸಾಲಿನ ಹಂಗಾಮಿನ ರೈತರ  ಬಾಕಿ ಹಣದ ಪಾವತಿ ಬಗ್ಗೆ ಹಾಗೂ ಮೈಷುಗರ್ ವ್ಯಾಪ್ತಿಯ ಕಬ್ಬು ಹಂಚಿಕೆಗೆ ಸಂಬಂಧಿಸಿದಂತೆ ನಡೆದ ಇಲಾಖಾ ಅಧಿಕಾರಿಗಳ  ಸಭೆ ನಡೆಸಿದರು.

ಜುಲೈ ಎರಡನೇ  ವಾರದಲ್ಲೆ ಕಾರ್ಖಾನೆ ಪ್ರಾರಂಭಿಸಲು ಕ್ರಮವಹಿಸುವಂತೆ ಕಾರ್ಖಾನೆ ಅಧಿಕಾರಿಗಳಿಗೆ ಡಿಸಿ ಸೂಚಿಸಿದರು.
ರೈತರ ಜೊತೆ ಉತ್ತಮ ಸಂಪರ್ಕ ಹೊಂದುವ ಮೂಲಕ ಅವರಿಗೆ ಸ್ಪಂದಿಸಬೇಕು ಎಂದರು.

ಕೂಲಿ ಕಾರ್ಮಿಕರಿಗೆ  ಸಾಮಾನ್ಯ ಅವಶ್ಯಕತೆಗಳನ್ನು  ಕಲ್ಪಿಸಿ, ಅವರು  ಕಾರ್ಖಾನೆಗಳಲ್ಲಿ  ಕೆಲಸ ಮಾಡಲು ಅವಕಾಶ ನೀಡಬೇಕೆಂದು  ಕಾರ್ಮಿಕ ಇಲಾಖೆಯ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸೂಚನೆ ಕೊಟ್ಟಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ಅಣ್ಣ – ತಂಗಿ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆ