Select Your Language

Notifications

webdunia
webdunia
webdunia
webdunia

ಡಿಸಿ ಕಚೇರಿ ಸಿಬ್ಬಂದಿ ಹೆಸರಿನಲ್ಲಿ ವಂಚಿಸಿ ಹಣ ಪೀಕಿದ ಖದೀಮರು!

ಡಿಸಿ ಕಚೇರಿ ಸಿಬ್ಬಂದಿ ಹೆಸರಿನಲ್ಲಿ ವಂಚಿಸಿ ಹಣ ಪೀಕಿದ ಖದೀಮರು!
ದಾವಣಗೆರೆ , ಶನಿವಾರ, 15 ಡಿಸೆಂಬರ್ 2018 (16:45 IST)
ಜಿಲ್ಲಾಧಿಕಾರಿಗಳ ಕಚೇರಿ ಸಿಬ್ಬಂದಿ ಹೆಸರಿನಲ್ಲಿ ಜನರಿಂದ ಹಣ ವಂಚನೆ ಮಾಡಿರುವ ಘಟನೆ ನಡೆದಿದೆ.

ದಾವಣಗೆರೆ ಜಿಲ್ಲೆಯ ಬಹುತೇಕ ಅಂಗನವಾಡಿಗಳಿಗೆ ತೆರಳಿ ಎರಡರಿಂದ ಐದು ಸಾವಿರ ರೂಪಾಯಿ ಸಂಗ್ರಹ ಮಾಡಿರುವ ಘಟನೆ ನಡೆದಿದೆ.

ರಾಜು ಮತ್ತು ರಾಕೇಶ್ ಎಂಬ ಯುವಕರಿಂದ ವಂಚನೆ ಮಾಡಲಾಗಿದೆ ಎಂಬ ದೂರು ಕೇಳಿಬಂದಿದೆ.
ದಾವಣಗೆರೆ ಜಿಲ್ಲೆಯ ಚನ್ನಗಿರಿ ಹಾಗೂ ದಾವಣಗೆರೆ ತಾಲೂಕಿನ 20ಕ್ಕೂ ಹೆಚ್ಚು ಅಂಗನವಾಡಿಗಳಿಗೆ ತೆರಳಿದ ಈ ಯುವಕರು ತಾವು ಡಿಸಿ ಕಚೇರಿ ಸಿಬ್ಬಂದಿ ಎಂದು ಹೇಳಿ  ಹಣ ಸಂಗ್ರಹ ಮಾಡಿದ್ದಾರೆ.

ಜಿಲ್ಲಾಧಿಕಾರಿ ಕಚೇರಿಯಿಂದ ಬಂದಿದ್ದು ಎಂದು ಹೇಳಿ ದಾಖಲೆ ಪರಿಶೀಲನೆ ನಡೆಸುವ ನೆಪ ಮಾಡಿ ಯುವಕರು
ನಂತರ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ.

ಈ ಕುರಿತು ಮಹಿಳಾ ಮತ್ತು ಮಕ್ಕಳ ಇಲಾಖೆಯಿಂದ ಆರೋಪಿಗಳ ವಿರುದ್ಧ ಚನ್ನಗಿರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಆರೋಪಿಗಳ ಪತ್ತೆಗೆ ಪೊಲೀಸರು ಮುಂದಾಗಿದ್ದಾರೆ.




Share this Story:

Follow Webdunia kannada

ಮುಂದಿನ ಸುದ್ದಿ

ಉಡ, ಚಿಪ್ಪು ಹಂದಿ ಮಾರಾಟಗಾರರ ಬಂಧನ