Select Your Language

Notifications

webdunia
webdunia
webdunia
webdunia

ಕಮಿಷನ್ ದಂಧೆಗೆ ಮಗಳು, ಮೊಮ್ಮಗ ಬಲಿ

ಕಮಿಷನ್ ದಂಧೆಗೆ ಮಗಳು, ಮೊಮ್ಮಗ ಬಲಿ
ದಾವಣಗೆರೆ , ಬುಧವಾರ, 11 ಜನವರಿ 2023 (20:43 IST)
ಬೆಂಗಳೂರಿನ ನಾಗವಾರದಲ್ಲಿ ಮೆಟ್ರೋ ಪಿಲ್ಲರ್ ಕುಸಿದು ತಾಯಿ, ಮಗು ದುರ್ಮರಣ ಹೊಂದಿದ್ದು, ಸಂಬಂಧಿಕರಲ್ಲಿ ದುಃಖ ಮಡುಗಟ್ಟಿದೆ. ದಾವಣಗೆರೆಯಲ್ಲಿ ಮಾತನಾಡಿದ ಮೃತ ತೇಜಸ್ವಿನಿ ದೊಡ್ಡಪ್ಪ ರಾಘವೇಂದ್ರ ರಾವ್​​​, ಕಮಿಷನ್ ದಂಧೆಗೆ ಮಗಳು, ಮೊಮ್ಮಗ ಬಲಿಯಾಗಿದ್ದಾರೆ. ಗುತ್ತಿಗೆದಾರರ ಬಳಿ ಕಮಿಷನ್ ಪಡೆದು ಕಾಮಗಾರಿ ಮಾಡಿಸುತ್ತಾರೆ. ಇದೇ ಕಾರಣಕ್ಕೆ ಕಳಪೆ ಕಾಮಗಾರಿ ನಡೆಯುತ್ತದೆ ಎಂದು ಆರೋಪಿಸಿದರು. ಸರ್ಕಾರ 20 ಲಕ್ಷ ಪರಿಹಾರ ಘೋಷಿಸಿದೆ, ಅವರ ಹಣ ಯಾರಿಗೆ ಬೇಕು. ಸಾವನಪ್ಪಿದ ನನ್ನ ಮಗಳು, ಮೊಮ್ಮಗುವನ್ನು ವಾಪಸ್​​ ತರಲು ಸಾಧ್ಯವಾ ಎಂದು ಪ್ರಶ್ನಿಸಿದರು.

Share this Story:

Follow Webdunia kannada

ಮುಂದಿನ ಸುದ್ದಿ

ಸ್ಯಾಂಟ್ರೋ ರವಿ BJP ಸರ್ಕಾರದ ಮುತ್ತು-KPCC ಅಧ್ಯಕ್ಷ ಡಿ.ಕೆ ಶಿವಕುಮಾರ್