Webdunia - Bharat's app for daily news and videos

Install App

ಅವರಪ್ಪನಿಗೆ ಹುಟ್ಟಿದ್ದರೇ ನನ್ನ ಆಡಿಯೋ ರಿಲೀಸ್ ಮಾಡು: ಇಂದ್ರಜಿತ್ ಗೆ ದರ್ಶನ್ ಚಾಲೆಂಜ್!

Webdunia
ಶನಿವಾರ, 17 ಜುಲೈ 2021 (19:57 IST)
ಅವರಪ್ಪನಿಗೆ ಹುಟ್ಟಿದ್ದರೆ, ನಿಜವಾಗಿಯೂ ಗಂಡಸಾಗಿದ್ದರೆ ನಾನು ಮಾತನಾಡಿರುವ ಆಡಿಯೋ ಕ್ಲಿಪ್ ಅನ್ನು ಸಂಜೆಯೊಳಗೆ ಬಿಡುಗಡೆ ಮಾಡಲಿ ಎಂದು ನಿರ್ದೇಶಕ ಇಂದ್ರಜೀತ್ ಲಂಕೇಶ್ ಗೆ ಚಾಲೇಂಜಿಂಗ್ ಸ್ಟಾರ್ ದರ್ಶನ್ ಸವಾಲು ಹಾಕಿದ್ದಾರೆ.
ಮೈಸೂರಿನಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 25 ಕೋಟಿ ವಂಚನೆ ಪ್ರಕರಣ ಇದೀಗ ಎಲ್ಲೇಲ್ಲಿಗೋ ತಿರುಗುತ್ತಿದೆ. ಇಂದ್ರಜಿತ್ ಲಂಕೇಶ್ ಗಾಂಡೂಗಿರಿ ನಡೆಯಲ್ಲ ಎಂದು ಹೇಳಿದ್ದಾರೆ. ಅವರಿಗೆ ನಾನು ಕೇಳ್ತಿದ್ದೀನಿ ನಿಮ್ಮಪ್ಪನಿಗೆ ಹುಟ್ಟಿದ್ದರೆ ನಾನು ಅವರೊಂದಿಗೆ ದೂರವಾಣಿಯಲ್ಲಿ ಮಾತನಾಡಿರುವ ಆಡಿಯೋ ಬಿಡುಗಡೆ ಮಾಡಲಿ ಎಂದರು.
25 ಕೋಟಿ ರೂ. ವಂಚನೆ ಪ್ರಕರಣ ದಿನಕ್ಕೊಂದು ಕಡೆ ತಿರುಗುತ್ತಿದೆ. ಹಲ್ಲೆ ಪ್ರಕರಣ ಅಂದರು, ಇದೀಗ ದೊಡ್ಡಮನೆವರೆಗೂ ಬಂದಿದೆ. ಇದರ ಹಿಂದೆ ಷಡ್ಯಂತ್ರ ನಡೆಸುವವರಿಗೂ ತಿಳಿಯಲಿ ಎಂದು ಅವರು ಹೇಳಿದರು.
ಸಂದೇಶ್ ನಾಗರಾಜ್ ಜೊತೆ ಮಾತನಾಡಿರುವ ಆಡಿಯೋ ಬಿಡುಗಡೆ ಮಾಡಲಾಗಿದ್ದು, ಸಂದೇಶ್ ನಾಗರಾಜ್ ವಾಯ್ಸ್ ಅಲ್ಲ ಅಂತಿದ್ದಾರೆ. ಆದರೆ ಇಂದ್ರಜಿತ್ ನನ್ನದೇ ವಾಯ್ಸ್ ಎಂದು ಅವರು ಹೇಳಿದರು. ಇದೀಗ ನಾನೇ ಅವರ ಬಳಿ ಮಾತನಾಡಿರುವ ಆಡಿಯೋ ಕ್ಲಿಪ್ ಬಿಡುಗಡೆ ಮಾಡಲಿ ಎಂದು ಅವರು ಹೇಳಿದರು.
ಡಾ.ರಾಜ್ ಕುಮಾರ್ ಕುಟುಂಬದ ವಿಷಯದ ಯಾಕೆ ತೆಗೆದಿದ್ದು? ಅವರ ಕುಟುಂಬದಿಂದಲೇ ನಮ್ಮ ತಂದೆ ಬಂದಿದ್ದು, ನಾನು ಕೂಡ ಪೂರ್ಣಿಮಾ ಎಂಟರ್ ಪ್ರೈಸಸಸ್ ನ ಜನುಮದ ಜೋಡಿ ಚಿತ್ರದಲ್ಲಿ 175 ರೂ. ಸಂಬಳಕ್ಕೆ ಕೆಲಸ ಮಾಡಿದ್ದೇನೆ. ಅವರ ಹೆಸರು ತಂದಿದ್ದು ಸರಿಯಲ್ಲ ಎಂದು ದರ್ಶನ್ ನುಡಿದರು.
ಪುನೀತ್ ರಾಜ್ ಕುಮಾರ್ ಅರಸು ಚಿತ್ರದ ವೇಳೆ ಮಾರಿದ್ದರು. ನಿರ್ಮಾಪಕ ಉಮಾಪತಿ ಇದನ್ನು ಖರೀದಿಸಿದ್ದನ್ನು ನಾನು ನಾನು ಕೊಡುವ ಮನಸ್ಸಿದೆಯಾ ಎಂದು ಕೇಳಿದ್ದೆ. ಅಡ್ವಾನ್ಸ್ ನಿಮ್ಮ ಬಳಿಯೇ ಇದೆಯಲ್ಲಾ ತಗೊಳ್ಳಿ ಎಂದರು. ಈಗಲೂ ಅದಕ್ಕೆ ಒಂದೂವರೆ ವರ್ಷದಿಂದ ಬಾಡಿಗೆ ಕಟ್ಟುತ್ತಿದ್ದಾರೆ ಎಂದು ದರ್ಶನ್ ಹೇಳಿದರು.

ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments