ಉಮಾಪತಿಗೆ 2 ದಿನ ಕಾಲವಕಾಶ ನೀಡಿದ್ದೇನೆ: ನಟ ದರ್ಶನ್

Webdunia
ಸೋಮವಾರ, 12 ಜುಲೈ 2021 (14:37 IST)
ಮೈಸೂರಿನಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಕರಣದ ಹಿಂದೆ ನಿರ್ಮಾಪಕ, ಉಮಾಪತಿ, ಹರ್ಷ ಮುಂತಾದವರ ಹೆಸರು ಕೇಳಿ ಬಂದಿದೆ. ಇವರೇ ಮಾಡಿಸಿದ್ದಾರೋ ಅಥವಾ ಇವರು ಮಿಕಗಳಾಗಿದ್ದಾರೋ ಗೊತ್ತಿಲ್ಲ. ಸದ್ಯದ ಪರಿಸ್ಥಿತಿಯಲ್ಲಿ ನಾನು ಯಾರ ಮೇಲೂ ಅನುಮಾನಪಡುತ್ತಿಲ್ಲ. ಯಾಕೆಂದರೆ ಇದರ ಹಿಂದಿನ ಉದ್ದೇಶ ಅರ್ಥವಾಗುತ್ತಿಲ್ಲ ಎಂದರು.
ಅರುಣಾ ಕುಮಾರಿ ಪೊಲೀಸರ ಬಳಿ ಇದರ ಹಿಂದೆ ಉಮಾಪತಿ ಇದ್ದಾರೆ. ಬಾಯಿ ಬಿಟ್ಟರೆ ಸಾಯಿಸುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ಹೇಳಿದ್ದಾಳೆ. ನಂತರ ಹರ್ಷ ಮತ್ತು ಇನ್ನಿತರರ ಹೆಸರು ಉಲ್ಲೇಖಿಸಿದ್ದಾಳೆ. ಆದರೆ ಮೊನ್ನೆ ಕರೆ ಮಾಡಿ ಇನ್ನೆರಡು ದಿನ ಸಮಯ ಕೊಡಿ. ಎಲ್ಲವನ್ನೂ ಹೇಳುತ್ತೇನೆ. ನಿಮಗೆ ಮೋಸ ಮಾಡುವ ಉದ್ದೇಶ ಹೊಂದಿಲ್ಲ ಎಂದು ಹೇಳಿದ್ದಾರೆ ಎಂದು ದರ್ಶನ್ ವಿವರಿಸಿದರು.
ಪೊಲೀಸರು ತನಿಖೆ ಮಾಡುವುದರ ಜೊತೆ ನಮ್ಮದೇ ಆದ ರೀತಿಯಲ್ಲಿ ಅನುಮಾನ ಬೆನ್ನು ಹತ್ತಿ ಹೋದಾಗ ಅರುಣಾಕುಮಾರಿ ನನ್ನ ಸೆಕ್ಯೂರೆಟಿ ಗಾರ್ಡ್ ಪತ್ನಿ ಎಂಬುದು ಗೊತ್ತಾಗಿದೆ. ಇವರು ನಾಲ್ಕೈದು ವರ್ಷದಿಂದ ದೂರ ಇದ್ದು, ಅರುಣಾಕುಮಾರಿ ಪಿಯುಸಿ ಅಷ್ಟೇ ಓದಿರುವುದು. ಆದ್ದರಿಂದ ಆಕೆ ಬ್ಯಾಂಕ್ ಮ್ಯಾನೇಜರ್ ಆಗಲು ಸಾಧ್ಯವಿಲ್ಲ ಎಂಬುದು ನಮಗೆ ತಿಳಿದು ಬಂದಿದೆ ಎಂದು ಅವರು ಹೇಳಿದರು.
ಉಮಾಪತಿ ತಪ್ಪು ಮಾಡಿದ್ದರೆ ನಮ್ಮ ಜೊತೆ ಇರುತ್ತಿರಲಿಲ್ಲ. ಅಲ್ಲದೇ ಹರ್ಷ ಮುಂತಾದವರು ಕೂಡ ನಮ್ಮ ಜೊತೆ ಇರುತ್ತಿರಲಿಲ್ಲ. ಸದ್ಯಕ್ಕೆ ಉಮಾಪತಿ ಕೂಡ ಎರಡು ದಿನ ಸಮಯಾವಕಾಶ ಕೇಳಿದ್ದಾರೆ. ಅಲ್ಲದೇ ಇಡೀ ಪ್ರಕರಣ ನಿಮ್ಮ ಸುತ್ತವೇ ತಿರುಗುತ್ತಿರುವುದರಿಂದ ನಿನ್ನನ್ನು ನೀನು ಹೇಗೆ ಸಮರ್ಥಿಸಿಕೊಳ್ಳುತ್ತಿಯಾ ನೋಡು ಎಂದು ಹೇಳಿದ್ದೇವೆ ಎಂದು ದರ್ಶನ್ ಹೇಳಿದರು.
ಉಮಾಪತಿ ಮೋಸ ಮಾಡುವುದಿದ್ದರೆ ಯಾಕೆ ಮಾಡುತ್ತಿದ್ದರು? ಎಲ್ಲರಿಗೂ ಗೊತ್ತಿರುವಂತೆ ಕೊರೊನಾ ಕಾಲದಲ್ಲೂ ದುಡ್ಡು ಮಾಡಿರುವುದು ಎಲ್ಲರಿಗೂ ಗೊತ್ತಿರುವ ವಿಷಯ. ಅವರಿಗೆ ದುಡ್ಡಿನ ಸಮಸ್ಯೆ ಇಲ್ಲ. ಸಿನಿಮಾ ಫೇಲ್ಯೂರ್ ಆಗಿದ್ದರೆ ಅನುಮಾನಪಡಬಹುದಾಗಿತ್ತು. ಅಲ್ಲದೇ ಉಮಾಪತಿ ನಮ್ಮ ಜೊತೆಗೆ ಇರುವುದರಿಂದ ಅವರ ಮೇಲೆ ಈಗಲೂ ಅನುಮಾನವಿಲ್ಲ ಎಂದು ದರ್ಶನ್ ಸ್ಪಷ್ಟಪಡಿಸಿದರು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಪಶ್ಚಿಮ ಏಷ್ಯಾ ಸಂಘರ್ಷ: ರಾಜ್ಯಸಭೆಯಲ್ಲಿ ನರೇಂದ್ರ ಮೋದಿ ಮಹತ್ವದ ಮಾತು ಸಾಧ್ಯತೆ

ಇಸ್ರೇಲ್‌ನಲ್ಲಿರುವ ಭಾರತೀಯರ ಬಗ್ಗೆ ಹೊಸ ಅಪ್ಡೇಟ್ ಕೊಟ್ಟ ವಿದೇಶಾಂಗ ವ್ಯವಹಾರಗಳ ಸಚಿವಾಲಯ

ಪ್ರಯಾಗ್‌ರಾಜ್‌ ಕಟ್ಟಡ ಕುಸಿತ ಪ್ರಕರಣ, ಮೃತರ ಕುಟುಂಬಕ್ಕೆ ಪ್ರಧಾನಿ 2ಲಕ್ಷ ಘೋಷಣೆ

ಕೊನೆಗೂ ಸಂಚಾರಕ್ಕೆ ಸಿದ್ಧವಾದ ಪಿಂಕ್ ಲೈನ್‌, ನಮ್ಮ ಮೆಟ್ರೋ ಪ್ರಯಾಣಿಕರಿಗೆ ಗುಡ್‌ನ್ಯೂಸ್‌

ಎರಡು ಕ್ಷೇತ್ರಗಳ ಉಪಚುನಾವಣೆ: ಬಿಜೆಪಿ ಗೆಲುವು ಪಕ್ಕಾ ಎಂದಾ ಬಿ.ಶ್ರೀರಾಮುಲು

ಮುಂದಿನ ಸುದ್ದಿ