ಮಕ್ಕಳನ್ನು ದತ್ತು ಪಡೆಯುವ ಮುನ್ನ ಎಚ್ಚರ! ಹಣ ಸುಲಿಗೆ ಮಾಡುತ್ತಿದ್ದ ತಾಯಿ, ಮಗ ಅರೆಸ್ಟ್!

Webdunia
ಸೋಮವಾರ, 12 ಜುಲೈ 2021 (14:12 IST)
ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ದತ್ತು ನಾಟಕವಾಡಿ ಹಣ ಸುಲಿಗೆ ಮಾಡುತ್ತಿದ್ದ ಲತಾ ಎಂಬಾಕೆಯನ್ನು ಈಗ ಪೊಲೀಸರ ವಶದಲ್ಲಿದ್ದಾಳೆ.
ತನಗೆ ಕ್ಯಾನ್ಸರ್ ಇದೆ. ಹಾಗಾಗಿ ಮಗನನ್ನು ಸಾಕಲು ಆಗುತ್ತಿಲ್ಲ ಎಂದು ಕತೆ ಕಟ್ಟಿ ತನ್ನ 9 ವರ್ಷದ ಮಗುವನ್ನು ದತ್ತು ನೀಡುವುದಾಗಿ ಲತಾ ನಂಬಿಸುತ್ತಿದ್ದಳು. ಮಗುವಿಗೆ ಗೊತ್ತಾಗದಂತೆ ಮನೆಗೆ ಬರುವಂತೆ ಸೂಚಿಸಿ, ನಾಪತ್ತೆ ನಾಟಕವಾಡಿ ದತ್ತು ಪಡೆದವರಿಂದ ಪದೇಪದೆ ಹಣ ವಸೂಲು ಮಾಡುತ್ತಿದ್ದಳು.
ಮಾನವೀಯ ದೃಷ್ಟಿಯಿಂದ ಕಸ್ತೂರಿ ಎಂಬುವವರ ಮನೆಯಲ್ಲಿ ಮಗುವನ್ನು ಬಿಟ್ಟು 4 ತಿಂಗಳ ನಂತರ ದತ್ತು ಸ್ವೀಕಾರ ಪ್ರಕ್ರಿಯೆ ಮುಗಿಸುವುದಾಗಿ ನಂಬಿಸಿದ್ದಳು.
ದತ್ತು ಪಡೆದ ಕಸ್ತೂರಿ ಮಗುವನ್ನು ಸ್ವಂತ ಮಗನಂತೆ ನೋಡಿಕೊಳ್ಳುತ್ತಿದ್ದರು. 3 ತಿಂಗಳ ಬಳಿಕ ಇದ್ದಕ್ಕಿದ್ದಂತೆ ಬಾಲಕ ದಾಖಲಾತಿ ಸಮೇತ ಕಣ್ಮರೆಯಾಗಿದ್ದ. ಕೂಡಲೇ ಕಸ್ತೂರಿ ಬಾಲಕ ನಾಪತ್ತೆಯಾಗಿರುವ ಬಗ್ಗೆ ಪೊಲೀಸರಿಗೆ ದೂರು ನೀಡಿದರು.
ಇದೇ ವೇಳೆ ತಾಯಿ ಲತಾಗೂ ಸಹ ಬಾಲಕ ನಾಪತ್ತೆ ಆಗಿರುವ ವಿಷಯವನ್ನು ಕಸ್ತೂರಿ ಗಮನಕ್ಕೆ ತಂದಿದ್ದರು. ಕೆಲವು ದಿನಗಳ ಬಳಿಕ ಬಾಲಕ ಪತ್ತೆಯಾಗಿದ್ದು, ಬಾಲಕ ನಿಮಗೆ ವಾಪಸ್ ಕೊಡಬೇಕಾದರೆ 20 ಸಾವಿರ ಕೊಡಿ ಎಂದು ಮತ್ತೆ ಡಿಮ್ಯಾಂಡ್ ಮಾಡಿದ್ದಾಳೆ.
ಇದರಿಂದ ಅಸಮಾಧಾನಗೊಂಡ ಕಸ್ತೂರಿ ಪೊಲೀಸರ ಬಳಿ ದೂರು ನೀಡಿದ್ದು. ಪೊಲೀಸರು ವಿಚಾರಣೆ ನಡೆಸಿದಾಗ ಆಘಾತಕ್ಕೆ ಒಳಗಾಗಿದ್ದಾರೆ. ಏಕೆಂದರೆ ಲತಾ ಇದೇ ರೀತಿ ಮಗುವನ್ನು ದತ್ತು ನೀಡುವುದಾಗಿ ಮೂವರನ್ನು ವಂಚಿಸಿರುವುದು ಪತ್ತೆ ಹೆಚ್ಚಿದ್ದಾರೆ.
ಮಗುವನ್ನು ದತ್ತು ನೀಡಿ 4 ತಿಂಗಳ ಸಮಯ ಕೇಳುವುದು, 3 ತಿಂಗಳ ನಂತರ ಮಗ ಓಡಿ ಬರುವುದು. ನಾಪತ್ತೆ ನಾಟಕವಾಡಿ ದತ್ತು ಪಡೆಯುವ ಆಸಕ್ತರಿಂದ ಹಣ ಸುಲಿಗೆ ಮಾಡುವುದೇ ಈಕೆಯ ಕಾಯಕ. ಅಮ್ಮನ ಮಾತಿನಂತೆ ಬಾಲಕ ನಾಟಕವಾಡಿ ದಾಖಲೆ ಸಮೇತ ಮನೆಗೆ ವಾಪಸ್ ಬರುತ್ತಿದ್ದ. ಇದೀಗ ಅನ್ನಪೂರ್ಣೇಶ್ವರಿನಗರ ಪೊಲೀಸರು ತಾಯಿ ಮಗನನ್ನ ವಶಕ್ಕೆ ಪಡೆದಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ತಾಯಂದಿರ ಎದೆಹಾಲಿನಲ್ಲಿ ಯುರೇನಿಯಂ ಪತ್ತೆ, ಮಕ್ಕಳ ಮೇಲೆ ಪರಿಣಾಮವೇನು ಗೊತ್ತಾ

ದುಬೈ ಏರ್ ಶೋ ದುರಂತ, ತಾಯ್ನಾಡಿಗೆ ಪೈಲೆಟ್ ನಮನ್ಶ್‌ ಸಿಯಾಲ್ ಪಾರ್ಥಿವ ಶರೀರ

ಕರೂರು ಕಾಲ್ತುಳಿತ ಬೆನ್ನಲ್ಲೇ ಪಕ್ಷದ ಮುಖಂಡರ ಸಭೆ ಕರೆದ ನಟ ವಿಜಯ್

ಸುಪ್ರೀಂಕೋರ್ಟ್‌ನ 53ನೇ ಮುಖ್ಯ ನ್ಯಾಯಮೂರ್ತಿಯಾಗಿ ಸೂರ್ಯಕಾಂತ್‌ ನಾಳೆ ಪ್ರಮಾಣ ಸ್ವೀಕಾರ

ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಮತ್ತಷ್ಟು ಕಳಪೆ ಮಟ್ಟಕ್ಕೆ ಇಳಿದ ವಾಯು ಗುಣಮಟ್ಟ

ಮುಂದಿನ ಸುದ್ದಿ
Show comments