Publish Date: Tue, 08 May 2018 (16:50 IST)
Updated Date: Tue, 08 May 2018 (16:51 IST)
ಯೋಗೇಶ್ವರ್ ಒಬ್ಬ ಸುಳ್ಳು ಶಾಸಕ.19 ವರ್ಷದಿಂದ ದಲಿತರ ಹೆಸ್ರಲ್ಲಿ ಅಧಿಕಾರ ಹಿಡಿದಿದ್ದಾರೆ ಆದ್ರೆ ತಾಲೂಕಿನಲ್ಲಿ ದಲಿತರ ಅಭಿವೃದ್ಧಿ ಆಗಿಲ್ಲ ಎಂದು ದಲಿತ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ತಮ್ಮ ಪ್ರಚಾರ ಕೈ ಪಿಡಿಯಲ್ಲಿ ಅಂಬೇಡ್ಕರ್ ಭವನ ಪೂರ್ಣಗೊಳಿಸಿರುವುದಾಗಿ ಹೇಳಿದ್ದಾರೆ. ಆದರೆ ಭವನ ಲೋಕಾರ್ಪಣೆಯಾಗದೆ ಶಿಥಿಲವಾಸ್ಥೆಗೆ ತಲುಪುತ್ತಿದೆ ಎಂದು ದಲಿತರು ಕಿಡಿಕಾರಿದ್ದಾರೆ.
ಪಟ್ಟಣದ ಅಂಬೇಡ್ಕರ್ ಭವನ ಎದುರು ಶಾಸಕ ಯೋಗೇಶ್ವರ್ ಮತ್ತು ಕೆ.ಶಿವರಾಮ್ ವಿರುದ್ಧ ಪ್ರತಿಭಟನೆ ಯೋಗೇಶ್ವರ್ ಚುನಾವಣಾ ಕರಪತ್ರ ಹಾಗೂ ಕೈಪಿಡಿಗೆ ಬೆಂಕಿ ಹಚ್ಚಿ ಈ ಬಾರೀ ಯೋಗೇಶ್ವರ್ ಗೆ ದಲಿತರು ಮತ ನೀಡಲ್ಲ ಎಂದು ಪ್ರತಿಭಟನೆ ವ್ಯಕ್ತಪಡಿಸಿದ್ದಾರೆ.