ಬೆಂಗಳೂರು: ಕಳೆದ ಕೆಲ ದಿನಗಳಿಂದ ಸುರಿಯುತ್ತಿದ್ದ ಭಾರೀ ಮಳೆಗೆ ಮಂಗಳೂರು ನಗರ ಪ್ರದೇಶದ ಜನರು ಪರದಾಡುವ ಸ್ಥಿತಿ ಉಂಟಾಗಿತ್ತು. ಹಲವೆಡೆ ಗುಡ್ಡ ಕುಸಿತ, ಭೂಕುಸಿತ ಪ್ರಕರಣಗಳು ವರದಿಯಾಗಿ, ಜೀವ ಹಾನಿ, ಆಸ್ತಿ ಹಾನಿಯಾದ ವರದಿಯಾಗಿದೆ.
ನಿರಂತರ ಸುರಿದ ಮಳೆಯಿಂದಾಗಿ ಹಲವೆಡೆ ಮನೆಯಿಂದ ಹೊರಬರಲು ಪರದಾಡಿದ ಸ್ಥಿತಿ ಎದುರಾಗಿತ್ತು. ಇನ್ನೂ ಅತ್ತಾವರದ ಕೆಎಂಸಿ ಆಸ್ಪತ್ರೆಗೂ ನೀರು ನುಗ್ಗಿದ ಘಟನೆಯೂ ನಡೆದಿದೆ. ಸಾಮಾಜಿಕ ಜಾಲತಾಣದಲ್ಲಿ ನೀರು ನುಗ್ಗಿರುವ ವಿಡಿಯೋವೊಂದು ವೈರಲ್ ಆಗಿದೆ.
ಹೊರಂಗಣದಲ್ಲಿ ನೀರು ತುಂಬಿ, ಅದು ಆಸ್ಪತ್ರೆಯ ಒಳಗೂ ನುಗ್ಗಿದೆ. ರೆಸೆಪ್ಷೆನ್ ಸೆಂಟರ್ ಹಾಗೂ ಕೆಲ ಕೊಠಡಿಯ ಒಳಗೂ ನೀರು ನುಗ್ಗಿದೆ. ಇದರಿಂದ ಆಸ್ಪತ್ರೆಯ ಒಳಗೂ ಸಿಬ್ಬಂದಿ ನಡೆದುಕೊಂಡು ಹೋಗಲು ಕಷ್ಟ ಪಟ್ಟಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳೆದ ಕೆಲ ದಿನಗಳಿಂದ ಸುರಿದ ಭಾರೀ ಮಳೆಗೆ ಹಲವೆಡೆ ಪ್ರವಾಹದ ಸ್ಥಿತಿ ನಿರ್ಮಾಣವಾಗಿತ್ತು. ಇದರಿಂದ ಸವಾರರು ವಾಹನ ಓಡಿಸಲು ಪರದಾಡಿದ್ದಾರೆ.