Select Your Language

Notifications

webdunia
webdunia
webdunia
webdunia

ಮಗು ರಕ್ಷಿಸಿ ಪ್ರಾಣಬಿಟ್ಟ ಅಪ್ಪ

ಮಗು ರಕ್ಷಿಸಿ ಪ್ರಾಣಬಿಟ್ಟ ಅಪ್ಪ
ಮಂಡ್ಯ , ಬುಧವಾರ, 2 ಮೇ 2018 (13:10 IST)
ನೀರಿನಲ್ಲಿ ಮುಳುಗುತ್ತಿದ್ದ ಒಂದು ವರ್ಷದ ಮಗನನ್ನು ರಕ್ಷಿಸಿ ತಂದೆಯೊಬ್ಬ ಪ್ರಾಣ ಬಿಟ್ಟಿರುವ ದಾರುಣ ಘಟನೆ ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ಬೀರೇಶ್ವರ ಗ್ರಾಮದ ಕೆರೆಯಲ್ಲಿ ನಡೆದಿದೆ. 
ಬೀರೇಶ್ವರ ಗ್ರಾಮದ ಫೈರೋಜ್ ಎಂಬಾತ ಮಗನನ್ನು ರಕ್ಷಿಸಿ ಪ್ರಾಣಬಿಟ್ಟ ತಂದೆ ಆಗಿದ್ದಾನೆ. ಪೈರೋಜ್ ಪತ್ನಿ ಜಬಿನ್ ತಾಜ್ ಕೆರೆಯಲ್ಲಿ ಬಟ್ಟೆ ತೊಳೆಯಲು ಹೋಗಿದ್ದರು. ಬಟ್ಟೆ ತೊಳೆಯುವ ಸಮಯದಲ್ಲಿ ಜಬಿನ್ ತಾಜ್ ಜೊತೆಯಲ್ಲೇ ಇದ್ದ ಪತಿ ಪೈರೋಜ್ ಮತ್ತು ಒಂದು ವರ್ಷದ ಮಗ,  ಈ ವೇಳೆ ಆಕಸ್ಮಿಕವಾಗಿ ನೀರಿಗೆ ಬಿದ್ದಿದ್ದಾನೆ.
 
 ಮಗನನ್ನು ರಕ್ಷಿಸಲು ನೀರಿಗಿಳಿದ ಪೈರೋಜ್, ಮಗನನ್ನು ರಕ್ಷಿಸಿ ನೀರಿನಲ್ಲೇ ಮುಳುಗಿ ಪ್ರಾಣಬಿಟ್ಟಿದ್ದಾನೆ. ಸರಿಯಾಗಿ ಈಜು ಬಾರದೇ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದು, ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿಯಿಂದ ಪೈರೋಜ್ ಶವ ಹೊರಕ್ಕೆ ತೆಗೆಯಲಾಗಿದೆ. 
 
ನೀರಿನಲ್ಲಿ ಮುಳುಗಿದ್ದ ಮಗು ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿದ್ದು, ನಾಗಮಂಗಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ದೆಹಲಿಯಲ್ಲಿ ಮಹದಾಯಿ ಹೋರಾಟ ನಾಲ್ಕನೆ ದಿನಕ್ಕೆ