Webdunia - Bharat's app for daily news and videos

Install App

ತುಮಕೂರಿನಲ್ಲಿ ಮುಂದುವರಿದ ಚುನಾವಣೆ ಘರ್ಷಣೆ

Webdunia
ಮಂಗಳವಾರ, 26 ಜೂನ್ 2018 (22:39 IST)
ಮಳೆ ನಿಂತರೂ ಮಳೆ ಹನಿ ಬೇಗ ನಿಲ್ಲುವುದಿಲ್ಲ ಎನ್ನುವ ಹಾಗೆ ರಾಜ್ಯದಲ್ಲಿ ವಿಧಾನ ಸಭೆ ಚುನಾವಣೆ ಮುಗಿದರೂ ಚುನಾವಣೋತ್ತರ ಘರ್ಷಣೆಗಳು ಅಲ್ಲಲ್ಲಿ ಮರುಕಳಿಸುತ್ತಲೇ ಇವೆ.

ತುಮಕೂರು ಜಿಲ್ಲೆಯ ಪಾವಗಡದಲ್ಲಿ ಚುನಾವಣಾ ರಾಜಕೀಯ ದ್ವೇಷ ಈಗಲೂ ಬೂದಿಮುಚ್ಚಿದ ಕೆಂಡದಂತಿದೆ. ಈ ದ್ವೇಷಕ್ಕೆ ಬೋರ್ ವೆಲ್, ಕೇಬಲ್ ನಾಶಪಡಿಸಲಾಗಿದೆ. ಪಾವಗಡ ತಾಲೂಕಿನ ಹುಸೇನ್ ಪುರ ಗ್ರಾಮದಲ್ಲಿ ಈ ಘಟನೆ ನಡೆದಿದೆ. ರೈತ ಕೆ.ಎಸ್.ರೆಡ್ಡಿ ಎಂಬುವರ ಜಮೀನಿನಲ್ಲಿ ದುರುಳರು ಅಟ್ಟಹಾಸ ಮೆರೆದಿದ್ದಾರೆ. ಜಮೀನಿನಲ್ಲಿರುವ ದಾಳಿಂಬೆ, ಶ್ರೀಗಂಧ ಸಸಿಗಳೂ ಕೂಡ ನಾಶವಾಗಿವೆ. ಕಳೆದ ವಿಧಾನಸಭೆ ಚುನಾವಣೆ ವೇಳೆ ಜೆಡಿಎಸ್ ಪರವಾಗಿ ರೈತ ಕೆ.ಎಸ್.ರೆಡ್ಡಿ ಕೆಲಸ ಮಾಡಿದ್ದರು.

ನಾಗಲಮಡಿಕೆ ಗ್ರಾಮದ ಸುತ್ತ ಈ ರೈತ ಪ್ರಭಾವ ಹೊಂದಿದ್ದರು. ಹೀಗಾಗಿ ರಾಜಕೀಯ ದ್ವೇಷದ ಕಾರಣ ಇವರ ಜಮೀನಿನಲ್ಲಿರುವ ಬೋರ್ ವೆಲ್ ನಾಶವಾಗಿದೆ. ಈ ಕುರಿತು ತಿರುಮಣಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments