Publish Date: Thu, 07 Jul 2022 (20:17 IST)
Updated Date: Thu, 07 Jul 2022 (20:21 IST)
ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಕೆ.ಎಚ್ ಮುನಿಯಪ್ಪ ಕಾಂಗ್ರೆಸ್ ನಿಂದ ದೂರ ಉಳಿಯುವ ಸಾಧ್ಯತೆ ಎಂಬ ಸುದ್ದಿ ಹರಿದಾಡಿತ್ತು. ಈದಕ್ಕೆ ಪುಷ್ಠಿ ಎಂಬಂತೆ ಮುನಿಯಪ್ಪ ಮಾಧ್ಯಮಗೋಷ್ಠಿ ನಡೆಸಿ ಮಾಜಿ ಸ್ಪೀಕರ್ ರಮೇಶ ಕುಮಾರ್ ವಿರುದ್ದ ಕಿಡಿ ಕಾರಿ ಎಲ್ಲ ಪಕ್ಷದ ಹೈಕಮಾಂಡ್ ಗೆ ನಿರ್ಣಯ ಬಿಟ್ಟಿದ್ದೇನೆ ಎಂದು ಹೇಳಿದ್ರು, ಆದ್ದರಿಂದ ಕೆ.ಎಚ್ ಮುನಿಯಪ್ಪ ಅವರ ಸಂಜಯನಗರ ನಿವಾಸಕ್ಕೆ ಕೆಪಿಸಿಸಿ ಅಧ್ಯಕ್ಷ ಡಿಕೆಶಿವಕುಮಾರ್ ನೇತೃತ್ವದಲ್ಲಿ ಕೈ ನಾಯಕರು ಬೇಟಿ ಮಾಡಿ ಮಾತು ಕತೆ ನಡೆಸಿ, ಮುನಿಯಪ್ಪ ಅವರ ಅಸಮಧಾನ ಬಗ್ಗೆ ವಿವರಣೆ ಪಡೆದು, ಮುನಿಯಪ್ಪ ಅವರಿಗೆ ಸಮಾದಾನ ಪಡಿಸಿದ್ದಾರೆ ಎನ್ನಲಾಗಿದೆ.