Select Your Language

Notifications

webdunia
webdunia
webdunia
webdunia

ಕಾಂಗ್ರೆಸ್ ಶಾಸಕ ವಿಧಿವಶ: ದೇವೇಗೌಡರಿಂದ ಸಂತಾಪ

ಕಾಂಗ್ರೆಸ್ ಶಾಸಕ ವಿಧಿವಶ: ದೇವೇಗೌಡರಿಂದ ಸಂತಾಪ
ಹಾಸನ , ಶನಿವಾರ, 24 ಮಾರ್ಚ್ 2018 (16:09 IST)
ಬೇಲೂರಿನ ಶಾಸಕರಾದ ವೈಎನ್ ರುದ್ರೇಶ್ ಗೌಡರು ವಿಧಿವಶರಾಗಿರುವ ಸುದ್ದಿಯನ್ನು ತಿಳಿದು ಮನಸ್ಸಿಗೆ ನೋವಾಗಿದೆ. ರಾಜಕೀಯದಲ್ಲಿ ಅಜಾತ ಶತ್ರು , ಸಜ್ಜನ ರಾಜಕಾರಣಿಯಾಗಿದ್ದ ವೈಎನ್ ರುದ್ರೇಶ್ ಗೌಡರ ನಿಧನದಿಂದ ಜಿಲ್ಲೆಯ ಒಬ್ಬ ಸಜ್ಜನ ರಾಜಕಾರಣಿ ಯನ್ನು ಕಳೆದುಕೊಂಡಿದೆ ಎಂದು ಮಾಜಿ ಪ್ರಧಾನಿ ಹಾಗೂ ಲೋಕಸಭಾ ಸದಸ್ಯರಾದ ಹೆಚ್.ಡಿ.ದೇವೇಗೌಡರು ಸಂತಾಪ ಸೂಚಿಸಿದ್ದಾರೆ.   
   
 ಶ್ರೀಯುತರು  ಜಿಲ್ಲಾ ಪಂಚಾಯತ್ ಅಧ್ಯಕ್ಷ ರಾಗಿ, ಲೋಕಸಭಾ ಸದಸ್ಯರಾಗಿ , ಶಾಸಕರಾಗಿ ಜಿಲ್ಲೆಯಲ್ಲಿ ಉತ್ತಮ ವಾಗ್ಮಿಯಾಗಿದ್ದರು.  ಅವರ ಆತ್ಮಕ್ಕೆ ಚಿರ ಶಾಂತಿ ಕರುಣಿಸಲಿ ಎಂದು  ಕೋರುತ್ತೇನೆ ಹಾಗೂ ಅವರ ಕುಟುಂಬದ ಸದಸ್ಯರಿಗೆ ಹಾಗೂ ಅಭಿಮಾನಿಗಳಿಗೆ ಈ ದುಃಖವನ್ನು ಭರಿಸುವ ಶಕ್ತಿ ಯನ್ನು ದೇವರು ನೀಡಲಿ ಎಂದು ಪ್ರಾರ್ಥಿಸುತ್ತೇನೆ .

Share this Story:

Follow Webdunia kannada

ಮುಂದಿನ ಸುದ್ದಿ

ಬಿಜೆಪಿಯವರು ಎರಡು ತಲೆ ನಾಗರಹಾವು ಇದ್ದಂತೆ: ಸಿಎಂ ವಾಗ್ದಾಳಿ