Publish Date: Thu, 12 May 2022 (17:19 IST)
Updated Date: Thu, 12 May 2022 (17:21 IST)
ಪಿಎಸ್ ಐ ನೇಮಕಾತಿ ಅಕ್ರಮದಲ್ಲಿ ತನಿಖೆ ನಡೆಸುತ್ತಿರುವ ಸಿಐಡಿ ಪೊಲೀಸ್ ಕಾಂಗ್ರಸ್ ಯುವ ಮುಖಂಡ ಸೇರಿದಂತೆ ಇಬ್ಬರು ಬ್ರೋಕರ್ ಗಳನ್ನು ಮಂಡ್ಯ ಜಿಲ್ಲೆಯ ನೆಲಮಂಗಲದಲ್ಲಿ ಬಂಧಿಸಿದ್ದಾರೆ.
ಸ್ಥಳೀಯ ಕಾಂಗ್ರೆಸ್ ಯುವ ಮುಖಂಡರಾಗಿರುವ ನಾಗಮಂಗಲದ ಶರತ್ ರಾಮಣ್ಣ ಬಂಧಿತ ಆರೋಪಿ.
ಶರತ್ ರಾಮಣ್ಣ ಮಾಜಿ ಸಚಿವ ಚೆಲುವರಾಯಸ್ವಾಮಿ ಆಪ್ತನಾಗಿದ್ದು, ಸ್ಥಳೀಯ ಪುರಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಸೋಲುಂಡಿದ್ದರು.
ಕಾಂಗ್ರೆಸ್ ಹಿರಿಯ ನಾಯಕರೊಂದಿಗೆ ನಿಕಟ ಸ್ನೇಹ ಹೊಂದಿರುವ ಶರತ್ ರಾಮಣ್ಣ ಅವರ ತಂದೆ ರಾಮಣ್ಣ ಮಂಡ್ಯದಲ್ಲಿ ಎಲೆಕ್ಟ್ರಿಷಿಯನ್ ಗುತ್ತಿಗೆದಾರರಾಗಿದ್ದಾರೆ.