Publish Date: Tue, 02 Jun 2026 (14:51 IST)
Updated Date: Tue, 02 Jun 2026 (14:54 IST)
ಬೆಂಗಳೂರು: ಸಿದ್ದರಾಮಯ್ಯಗೆ ಸಮೀಪವರ್ತಿ ಎಂದೇ ಡಿಕೆ ಶಿವಕುಮಾರ್ ಗೆ ಆಪ್ತ ಎಂಬ ಕಾರಣಕ್ಕೋ ನನಗೆ ಸಚಿವಗಿರಿ ಸಿಕ್ಕೇ ಸಿಗುತ್ತದೆ ಎಂದು ನಿರೀಕ್ಷೆಯಲ್ಲಿದ್ದವರಿಗೆ ಕಾಂಗ್ರೆಸ್ ಹೈಕಮಾಂಡ್ ಶಾಕ್ ಕೊಟ್ಟಿದೆ.
ಸಚಿವ ಸ್ಥಾನ ಹಂಚಿಕೆ ಮಾಡಲು ಕಾಂಗ್ರೆಸ್ ಹೈಕಮಾಂಡ್ ತನ್ನದೇ ಸೂತ್ರ ಅಳವಡಿಸಿಕೊಂಡಿದೆ. ಇದರಿಂದಾಗಿ ರಾಜ್ಯದ ನಾಯಕರ ಲೆಕ್ಕಾಚಾರಗಳು ತಲೆಕೆಳಗಾಗಿವೆ. ಸಚಿವ ಸ್ಥಾನ ನೀಡುವಾಗ ಇದುವರೆಗೆ ಹಿರಿಯ ನಾಯಕರು, ಪ್ರಭಾವಿ ನಾಯಕರು, ಅನುಭವಿಗಳಿಗೆ ಮಣೆ ಹಾಕಲಾಗುತ್ತಿತ್ತು.
ಆದರೆ ಹೈಕಮಾಂಡ್ ನಾಯಕರು ಮುಂಬರುವ ಚುನಾವಣೆ ದೃಷ್ಟಿಯಲ್ಲಿಟ್ಟುಕೊಂಡು ಹೊಸಬರಿಗೆ ಮತ್ತು ಯುವಕರಿಗೆ ಇಷ್ಟು ಅಂತ ಸಚಿವ ಸ್ಥಾನ ಫಿಕ್ಸ್ ಮಾಡಿಕೊಂಡಿದೆ. ಅದರಂತೆ ವಯಸ್ಸಿಗೆ ಅನುಗುಣವಾಗಿ ಸಚಿವ ಸ್ಥಾನ ಹಂಚಿಕೆ ಮಾಡಲಾಗುತ್ತದೆ. ಹೀಗಾಗಿ ಈ ಬಾರಿ ಆಪ್ತರು, ಹಿರಿಯರು ಎಂಬುದು ಮಾತ್ರ ಮಾನದಂಡವಾಗಲ್ಲ. ಹೊಸಬರನ್ನೂ ಸಚಿವರಾಗಿ ನೋಡಬಹುದು. ಇದೇ ಮಾನದಂಡದ ಪ್ರಕಾರ ಡಿಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ಪ್ರತ್ಯೇಕ ಪಟ್ಟಿ ಸಿದ್ಧಪಡಿಸಿದ್ದಾರೆ. ಇದರಲ್ಲಿ ಹೈಕಮಾಂಡ್ ಅಂತಿಮವಾಗಿ ಯಾವುದನ್ನು ಆಯ್ಕೆ ಮಾಡಲಿದೆ ಎನ್ನುವುದು ಕುತೂಹಲದ ವಿಚಾರ.
About Writer
ಕೃಷ್ಣವೇಣಿ ಕೆ
Completed bachelor degree in Journalism and communication in SDMC Ujire. 15 years of experience as journalist. Worked as sub editor and reporter. Specialties in sports, politics and entertainment.....
ಮತ್ತಷ್ಟು ಓದಿ