Select Your Language

Notifications

webdunia
webdunia
webdunia
webdunia

ಕಾಂಗ್ರೆಸ್​ಗೊಂದು ನೀತಿ, ಸಿದ್ದುಗೊಂದು ನೀತಿನಾ?

ಕಾಂಗ್ರೆಸ್​ಗೊಂದು ನೀತಿ, ಸಿದ್ದುಗೊಂದು ನೀತಿನಾ?
ಶಿವಮೊಗ್ಗ , ಗುರುವಾರ, 6 ಏಪ್ರಿಲ್ 2023 (17:42 IST)
ಚುನಾವಣೆ ಹಿನ್ನೆಲೆಯಲ್ಲಿ ಒಬ್ಬರನೊಬ್ಬರು ಟೀಕಿಸುವುದು ಮಮೂಲಿಯಾಗಿ ಬಿಟ್ಟಿದೆ. ಶಿವಮೊಗ್ಗದಲ್ಲಿ ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಮಾಜಿ ಸಿಎಂ ಸಿದ್ದರಾಮಯ್ಯ ಕುರಿತು ನಾಲಿಗೆ ಹರಿಬಿಟ್ಟಿದ್ದಾರೆ. ಅಲೆಮಾರಿ ಸಿದ್ದರಾಮಯ್ಯ ಬಗ್ಗೆ ಏನು ಹೇಳಲಿ. ಕಾಂಗ್ರೆಸ್ ಗೊಂದು ನೀತಿ, ಸಿದ್ದರಾಮಯ್ಯ ಗೊಂದು ನೀತಿನಾ...?, ಸಿದ್ದರಾಮಯ್ಯ ಎಲ್ಲೇ ನಿಂತರೂ ಸೋಲ್ತಾರೆ. ಅವರೇ ಚುನಾವಣೆ ಗೆಲ್ಲುತ್ತಾರೆ ಎನ್ನುವ ವಿಶ್ವಾಸವಿಲ್ಲ. ಹಾಗಿರುವಾಗ ಸಿಎಂ ಆಗುವುದಾಗಿ ಹೇಳಿಕೆ ನೀಡಲು ಅಧಿಕಾರ ಕೊಟ್ಟಿದ್ಧು ಯಾರು ಎಂದು ಸಿದ್ಧರಾಮಯ್ಯ ವಿರುದ್ಧ ಈಶ್ವರಪ್ಪ ವಾಗ್ದಾಳಿ ನಡೆಸಿದ್ರು.. ಡಿಕೆಶಿ ಸಿಎಂ ಆಗುವುದಿಲ್ಲ ಎನ್ನುವ ಭವಿಷ್ಯ ಹೇಳಿದ್ದು ಯಾಕೆ..? ಜಾತಿ ಮೇಲೆ ಸಿಎಂ ಆಗುವುದಾಗಿ ಇಬ್ಬರೂ ಹೇಳಿಕೆ ನೀಡುತ್ತಿದ್ದಾರೆ. ಅಧಿಕೃತವಾಗಿ ಕಾಂಗ್ರೆಸ್ ಪಕ್ಷ ವಿರೋಧ ಪಕ್ಷವಾಗಿಯೂ ರಾಜ್ಯದಲ್ಲಿ ಉಳಿಯುವುದಿಲ್ಲ ಎಂದು ಕಾಂಗ್ರೆಸ್ ವಿರುದ್ದ ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಕಿಡಿಕಾರಿದರು.

Share this Story:

Follow Webdunia kannada

ಮುಂದಿನ ಸುದ್ದಿ

ಯಾರೂ ಬಿಜೆಪಿ ಬಿಟ್ಟು ಕಾಂಗ್ರೆಸ್​ಗೆ ಹೋಗಲ್ಲ- ಬಿ.ಸಿ.ಪಾಟೀಲ್