Webdunia - Bharat's app for daily news and videos

Install App

ಕಾಂಗ್ರೆಸ್ ಸರ್ಕಾರ ಉಳಿಯಲ್ಲ- ಯುವಮೋರ್ಚಾ ಅಧ್ಯಕ್ಷ ಧೀರಜ್ ಮುನಿರಾಜು

geetha
ಗುರುವಾರ, 1 ಫೆಬ್ರವರಿ 2024 (18:42 IST)
ಬೆಂಗಳೂರು-ಮಾಗಡಿ ಶಾಸಕ ಬಾಲಕೃಷ್ಣ ಹೇಳಿಕೆ ವಿಚಾರವಾಗಿ ನಗರದಲ್ಲಿ ಬಿಜೆಪಿ ಯುವಮೋರ್ಚಾ ಅಧ್ಯಕ್ಷ ಧೀರಜ್ ಮುನಿರಾಜು ಪ್ರತಿಕ್ರಿಯಿಸಿದ್ದಾರೆ.ನಾವೆಲ್ಲಾ ಶಾಸಕರಾದ ಮೊದಲ ದಿನದಿಂದ ವಿಧಾನಸೌಧದಲ್ಲಿ ಪ್ರತಿಭಟನೆ ಮಾಡಿದ್ದೆವು.ಇವರದ್ದು ಬೋಗಸ್ ಗ್ಯಾರಂಟಿ ಅಂತ.ಬ್ಲಾಕ್ ಮೇಲ್ ರಾಜಕಾರಣ ಮಾಡ್ತಿದ್ದಾರೆ.ನೀವು ಓಟ್ ಕೊಟ್ರೆ ಗ್ಯಾರಂಟಿ ಕೊಡ್ತೀವಿ, ಇಲ್ಲದಿದ್ರೆ ವಾಪಸ್ ತಗೋತೀವಿ ಅಂತ.ಮತದಾರರಿಗೆ ಬೆದರಿಸೋ ಕೆಲಸ ಮಾಡ್ತಿದ್ದಾರೆ.ಎಷ್ಟು ಜನರಿಗೆ ಗ್ಯಾರಂಟಿ ತಲುಪುತ್ತಿದೆ.ಐದು ಕೆಜಿ ಅಕ್ಕಿ ಅಕ್ಕಿಯನ್ನ ಕೇಂದ್ರದಿಂದ ಕೊಡ್ತಿದ್ದಾರೆ.ಆದ್ರೆ ಇವರು ಮೂರು ಕೆ.ಜಿ ಅಕ್ಕಿ ಕೊಟ್ಟು, ಎರಡು ಕೆಜಿ ರಾಗಿ ಕೊಡ್ತಿದ್ದಾರೆ.ಐದು ಕೆಜಿ ಅಕ್ಕಿ ಕೊಡಬಹುದಲ್ವಾ.?ಬೆಂಗಳೂರು ಗ್ರಾಮಾಂತರ ಪ್ರದೇಶದಲ್ಲಿ ಅವರು ಈ ಹೇಳಿಕೆ ನೀಡಿದ್ದಾರೆ.
 
ಬೆಂಗಳೂರು ಗ್ರಾಮಾಂತರ ಪ್ರದೇಶಗಳಲ್ಲಿ ಬಿಜೆಪಿ ಅಲೆ ಶುರುವಾಗಿದೆ.ಹಾಗಾಗಿ ಹೆದರಿ ಈ ರೀತಿ ಹೇಳ್ತಿದ್ದಾರೆ.ಎಂಟು ತಿಂಗಳಲ್ಲಿ ಅಭಿವೃದ್ಧಿ ಶೂನ್ಯ ಇವರ ಆಡಳಿತ.ದೊಡ್ಡಬಳ್ಳಾಪುರದಲ್ಲಿ ಹೋರಾಟ ಮಾಡಿದ್ದೇವೆ.ರೈತರಿಗೆ ಬರ ಪರಿಹಾರ ನೀಡಿಲ್ಲ.ಡರಡು ಸಾವಿರ ಪರಿಹಾರ ಬೇಡ ಅಂತ ಆಕ್ರೋಶ ವ್ಯಕ್ತಪಡಿಸಿದ್ದಾರೆ.ಅವಶ್ಯಕತೆ ಇರೋದಕ್ಕೆ ಇವರು ಕೊಡ್ತಿಲ್ಲ.
 
ಅಕ್ಷತೆ ಬೇಕಾ, ಅಕ್ಕಿ ಬೇಕಾ‌ ಅನ್ನೋ ವಿಚಾರವಾಗಿ ಅಕ್ಷತೆ ಬೇಕಾ.? ಗ್ಯಾರಂಟಿ ಬೇಕಾ.? ಈ ರೀತಿ ಕೇಳಿದ್ದಾರೆ.ಕಾಂಗ್ರೆಸ್ ಸೋಲನ್ನ ಒಪ್ಪಿಕೊಂಡಂತಾಗಿದೆ.ಜನರನ್ನ ಬ್ಲಾಕ್ ಮೇಲೆ ಮಾಡ್ತಿದ್ದಾರೆ.ಕಾಂಗ್ರೆಸ್ ಸರ್ಕಾರ ಲೋಕಸಭಾ ಚುನಾವಣೆ ಬಳಿಕ ಉಳಿಯಲ್ಲ.ಹನುಮಂತನ ಬಾಲಕ್ಕೆ ಬೆಂಕಿ ಹಚ್ಚಿದ್ದಾರೆ.ಇವರ ಸರ್ಕಾರ ಉಳಿಯಲ್ಲ ಎಂದು ಯುವಮೋರ್ಚಾ ಅಧ್ಯಕ್ಷ ಧೀರಜ್ ಮುನಿರಾಜು  ಹೇಳಿದ್ದಾರೆ.
 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments