Select Your Language

Notifications

webdunia
webdunia
webdunia
webdunia

ಕುತೂಹಲ ಕೆರಳಿಸಿದ ಎಚ್‌ಡಿಕೆ ಸೋಮಣ್ಣ ಭೇಟಿ

ಸೋಮಣ್ಣ

geetha

bangalore , ಗುರುವಾರ, 1 ಫೆಬ್ರವರಿ 2024 (14:00 IST)
ಬೆಂಗಳೂರು : ಬಿಜೆಪಿಯಿಂದ ಒಂದು ಕಾಲು ಹೊರಗಿಟ್ಟಿದ್ದ ಸೋಮಣ್ಣ ಅವರ ನಡೆ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿತ್ತು. ಸೋಮಣ್ಣ ಕಾಂಗ್ರೆಸ್‌ ಪಕ್ಷಕ್ಕೆ ಸೇರುವುದು ಖಚಿತ ಎನ್ನಲಾಗಿತ್ತಷ್ಟೇ ಅಲ್ಲದೇ ಹಲವು ಬಾರಿ ಕಾಂಗ್ರೆಸ್‌ ಮುಖಂಡರೊಡನೆ ಸೋಮಣ್ಣ ವೇದಿಕೆ ಹಂಚಿಕೊಂಡಿದ್ದರು. ಜೊತೆಗೆ ಕಾಂಗ್ರೆಸ್‌ ಸೇರ್ಪಡೆಯ ಸುಳಿವೂ ಸಹ ನೀಡಿದ್ದರು. ಆದರೆ ಮಾಜಿ ಸಿಎಂ ಎಚ್‌. ಡಿ. ಕುಮಾರಸ್ವಾಮಿ ಅವರನ್ನು ಭೇಟಿಯಾಗಿದ್ದಾರೆ. ಬಿಡದಿಯ ತೋಟದ ಮನೆಯಲ್ಲಿ ಎಚ್‌ಡಿಕೆ ಅವರನ್ನು ಭೇಟಿಯಾದ ಸೋಮಣ್ಣ ಇದೊಂದು ಸೌಹಾರ್ದಯುತ ಭೇಟಿ ಎಂದಿದ್ದಾರೆ. 

ಪಂಚರಾಜ್ಯ ಚುನಾವಣೆಯ ಫಲಿತಾಂಶ, ಅಯೋಧ್ಯೆ ರಾಮಮಂದಿರದ ಹವಾ ಹಾಗೂ ಜಗದೀಶ್‌ ಶೆಟ್ಟರ್‌ ಘರ್‌ ವಾಪ್ಸಿ ಸೋಮಣ್ಣ ಅವರನ್ನು ಪಕ್ಷ ಬಿಡಲು ಹಿಂಜರಿಯುವಂತೆ ಮಾಡಿದೆ ಎನ್ನಲಾಗಿದ್ದು, ಸಧ್ಯಕ್ಕೆ ಲೋಕಸಭಾ ಚುನಾವಣೆಯಲ್ಲಿ ಟಿಕೆಟ್‌ ಪಡೆಯಲು ಪ್ರಯತ್ನಿಸುತ್ತಿದ್ದಾರೆನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಎಚ್‌ಡಿಕೆ ಮತ್ತು ಸೋಮಣ್ಣ ಭೇಟಿ ಕುತೂಹಲ ಮೂಡಿಸಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಮಧ್ಯಂತರ ಬಜೆಟ್ 2024: ಆದಾಯ ತೆರಿಗೆಯಲ್ಲಿ ಆಗಿರುವ ಬದಲಾವಣೆ ಏನು?