Publish Date: Thu, 26 Jan 2023 (18:41 IST)
Updated Date: Thu, 26 Jan 2023 (18:44 IST)
ಕಂದಾಯ ಸಚಿವ ಆರ್ ಅಶೋಕ್ ಗೆ ಮಂಡ್ಯದಲ್ಲಿ ಗೋ ಬ್ಯಾಕ್ ಪೊಸ್ಟರ್ ಅಭಿಯಾನವನ್ನ ಆರಂಭಿಸಿ. ಸ್ಪಪಕ್ಷೀಯರೇ ಜಿಲ್ಲಾ ಉಸ್ತುವಾರಿ ಜವಾಬ್ದಾರಿ ಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಈ ವಿಚಾರಕ್ಕೆ ಕಾಂಗ್ರೆಸ್ ಟ್ವೀಟ್ ಮಾಡಿದ್ದು ಬಿಜೆಪಿ ಕಾರ್ಯಕರ್ತರೇ ಬಿಜೆಪಿ ನಾಯಕರಿಗೆ "ಗೋ ಬ್ಯಾಕ್" ಎನ್ನುತ್ತಿರುವ ಪ್ರಕರಣ ಹೆಚ್ಚುತ್ತಿದೆ.ಹಿಂದೆ ನಳೀನ್ ಕುಮಾರ್ ಕಟೀಲ್ ಕಾರು ಅಲ್ಲಾಡಿಸಿ ಗೋ ಬ್ಯಾಕ್ ಎಂದಿದ್ದರು.ನಂತರ ಗೃಹಸಚಿವರ ಮನೆ ಮೇಲೆ ದಾಳಿ ನಡೆಸಿದ್ದರು.ಈಗ ಆರ್ ಅಶೋಕ್ ಅವರ ಸರದಿ.ಕದನ ಎಂಬುದು ಕಾಳ್ಗಿಚ್ಚಿನಂತೆ, ಬಿಜೆಪಿಯನ್ನು ನಾಶ ಮಾಡಿಯೇ ಶಮನ ಆಗುವುದು ಎಂದು ಟ್ವೀಟ್ ಮೂಲಕ ಕಾಂಗ್ರೆಸ್ ಲೇವಡಿ ಮಾಡಿದೆ