Select Your Language

Notifications

webdunia
webdunia
webdunia
webdunia

ಜನತಾ ಪಾರ್ಟಿ ನೂತನ ಕಾರ್ಯಾಲಯದ ಉದ್ಘಾಟನ ಕಾರ್ಯಕ್ರಮ

Inauguration program of Janata Party new office
ಇಂದು ಹೆಬ್ಬಾಳ ವಿಧಾನಸಭಾ ಕ್ಷೇತ್ರದಲ್ಲಿ ಭಾರತೀಯ ಜನತಾ ಪಾರ್ಟಿ ನೂತನ ಕಾರ್ಯಾಲಯದ ಉದ್ಘಾಟನ ಕಾರ್ಯಕ್ರಮ ಏರ್ಪಡಿಸಿದ್ದು, ಭಾರತೀಯ ಜನತಾ ಪಾರ್ಟಿ ನೂತನ ಕಚೇರಿಯನ್ನು ಮಾಜಿ ಸಿಎಂ ಸದಾನಂದ ಗೌಡ ಉದ್ಘಾಟಿಸಿದರು.ಇನ್ನೂ ಕಾರ್ಯಕ್ರಮದಲ್ಲಿ ಮಾತನಾಡಿದ ಮಾಜಿ ಸಚಿವ ಕಟ್ಟಾ ಸುಬ್ರಮಣ್ಯ ನಾಯ್ಡು ನೂರಕ್ಕೆ ನೂರು ಭಾರತೀಯ ಜನತಾ ಪಾರ್ಟಿಯ ಅಭ್ಯರ್ಥಿಯನ್ನ ಗೆಲ್ಲಿಸುತ್ತೇವೆ ಎಂದು ಹೇಳಿ ಹೆಬ್ಬಾಳ ವಿಧಾನಸಭಾ ಕ್ಷೇತ್ರದ ಶಾಸಕನ ವಿರುದ್ಧ ಕಿಡಿ ಕಾರಿದರು,ಸಾವಿರದ ನೂರ ಇಪ್ಪತ್ತು ಕೋಟಿ ಹಣ ಕ್ಷೇತ್ರಕ್ಕೆ ಬಂದಿದ್ದು, 30ರಿಂದ 40 % ಮಾತ್ರ ಕ್ಷೇತ್ರದಲ್ಲಿ ಕೆಲಸ ಆಗಿದೆ. ಮಿಕ್ಕಿದ ಹಣ ಎಲ್ಲಿಗೆ ಹೋಯ್ತು, ಕ್ಷೇತ್ರದಲ್ಲಿ ಏನೇನು ಅಭಿರುದ್ಧಿ ಆಗಿದೆ ಅಂತ ಹೆಬ್ಬಾಳ ವಿಧಾನಸಭಾ ಕ್ಷೇತ್ರ ಶಾಸಕರನ್ನ ಪ್ರಶ್ನಿಸಿದ್ದಾರೆ. ಇನ್ನು ಕಾರ್ಯಕ್ರಮದಲ್ಲಿ ಕಟ್ಟಾ ಸುಬ್ರಮಣ್ಯ ನಾಯ್ಡು ಸೇರಿದಂತೆ ಛಲವಾದಿ ನಾರಾಯಣಸ್ವಾಮಿ, ರಾಜ್ಯಸಭಾ ಸದಸ್ಯರಾದ ಕೆ.ಬಿ ಕೃಷ್ಣ ಮೂರ್ತಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Share this Story:

Follow Webdunia kannada

ಮುಂದಿನ ಸುದ್ದಿ

ಲಾಲ್ ಬಾಗ್ ನ್ನ ಫಲಪುಷ್ಪ ವೀಕ್ಷಣೆಗೆ ಆಗಮುಸುತ್ತಿರುವ ನೂರಾರು ಜನರು